- Advertisement -
- Advertisement -




ಕುಂಡಡ್ಕ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡದಿಂದ ಗುರುವಂದನೆ ಕಾರ್ಯಕ್ರಮ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.



ಕುಣಿತ ಭಜನಾ ವಿದ್ಯಾರ್ಥಿಗಳಿಂದ ಗುರುಗಳಾದ ಮೊನಿಷ್ ವಿಟ್ಲ ಇವರಿಗೆ ಗುರುಕಾಣಿಕೆ ಸಮರ್ಪಿಸಲಾಯಿತು. ಈ ಸಂದರ್ಭ ಮೊನಿಷ್ ವಿಟ್ಲ ಹಾಗೂ ಇವರ ಪೊಷಕರಾದ ಲತಾ ಲೊಕೇಶ್ ಇವರನ್ನು ಸನ್ಮಾನಿಸಲಾಯಿತು. ನಂತರ ಕುಣಿತ ಭಜನೆ ಹಾಗೂ ವಿಶ್ವಗುರು ಭರತನಾಟ್ಯ ಕಲಾಶಾಲೆ ಕುರಿಯ, ವಿಷ್ಣುನಗರ ಅಂಗನವಾಡಿ, ಗುಣಶ್ರೀ ವಿದ್ಯಾಲಯ ಕುಂಡಡ್ಕ ಹಾಗೂ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
- Advertisement -