ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ.) ವಿಷ್ಣುನಗರ ಕುಂಡಡ್ಕ ಇದರ ಎಂಟನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 10-01-2021 ನೇ ಭಾನುವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅರ್ಧ ಏಕಾಹ ಭಜನಾ ಉತ್ಸವ ನಡೆಯಿತು.
ಬೆಳಿಗ್ಗೆ ಗಂಟೆ 6:00ಕ್ಕೆ ಶ್ರೀ ಕೃಷ್ಣಪ್ಪ ಪೂಜಾರಿ ಪಾಂಡೇಲು (ಗುರುಸ್ವಾಮಿ) ಅರ್ಧ ಏಕಾಹ ಭಜನಾ ಉತ್ಸವವನ್ನು ಉದ್ಘಾಟನೆ ಮಾಡಿದರು. 12 ಭಜನಾ ತಂಡಗಳು ಭಾಗವಹಿಸಿ ರಾತ್ರಿ ಗಂಟೆ 7:30 ಕ್ಕೆ ಶ್ರೀ ದೇವರಿಗೆ ವಿಶೇಷ ದೀಪಾಲಂಕಾರದೊಂದಿಗೆ ಮಹಾಪೂಜೆ ನಡೆಯಿತು.
ವಾರ್ಷಿಕೋತ್ಸವದ ಪ್ರಯುಕ್ತ ಸಭಾ ಕಾರ್ಯಕ್ರಮ ಮತ್ತು ವಿಶ್ವ ಹಿಂದೂಪರಿಷತ್ ಭಜರಂಗದಳದ ನೂತನ ಘಟಕದ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಲೋಕೇಶ್ ಶೆಟ್ಟಿ ಕಲ್ಲಂದಡ್ಕ (ವ್ಯವಸ್ಥಾಪಕ ನಿರ್ದೇಶಕರು ನವಚೇತನ ಚಿಟ್ಸ್ ಕೋ. ಪ್ರೈವೇಟ್ ಲಿಮಿಟೆಡ್), ಧಾರ್ಮಿಕ ಉಪನ್ಯಾಸ ವಿನೋದ್ ಅಡ್ಕಸ್ಥಳ (ತಾಲೂಕು ಸಂಪರ್ಕ ಪ್ರಮುಖ್ ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಟ್ಲ ತಾಲೂಕು), ಗೌರವ ಉಪಸ್ಥಿತಿ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಯೋಗೀಶ್ ಕುಡ್ವ (ಕುಡ್ವ ಮನೆತನ), ದಯಾನಂದ ಶೆಟ್ಟಿ ಉಜಿರೆಮಾರು (ಗೌರವಾಧ್ಯಕ್ಷರು ಶ್ರೀ ವಿಷ್ಣುಮೂರ್ತಿ ಯುವಕವೃಂದ ವಿಷ್ಣುನಗರ ಕುಂಡಡ್ಕ), ಕೃಷ್ಣಪ್ಪ (ಅಧ್ಯಕ್ಷರು ವಿಶ್ವ ಹಿಂದೂಪರಿಷತ್ ವಿಟ್ಲ ಪ್ರಖಂಡ), ಮಿಥುನ್ ಪೂಜಾರಿ ಹೊಸಮನೆ (ಸಂಚಾಲಕರು ವಿಶ್ವ ಹಿಂದೂಪರಿಷತ್ ವಿಟ್ಲ ಪ್ರಖಂಡ), ರಮೇಶ್ ಎಸ್ (ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಿ.ಸಿ ಟ್ರಸ್ಟ್ ವಿಟ್ಲ ವಲಯ) ಹಾಗೂ ಯುವಕ ವೃಂದದ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.
ದಯಾನಂದ ಶೆಟ್ಟಿ ಉಜಿರೆಮಾರು ಸ್ವಾಗತಿಸಿ, ವಿನೋದ್ ವಿಷ್ಣುನಗರ ನಿರೂಪಿಸಿ, ಮನೋಜ್ ಕಂಪ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಠಲ ನಾಯಕ್ ಕಲ್ಲಡ್ಕ ರವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.