Monday, June 30, 2025
spot_imgspot_img
spot_imgspot_img

ಕುಂಡಡ್ಕ:( ನ.30) ವಿಷ್ಣು ಫ್ರೇಂಡ್ಸ್‌‌‌ ಕುಂಡಡ್ಕ ಆಶ್ರಯದಲ್ಲಿ ದಿ| ಉಮೇಶ್‌‌‌ ಅರ್ಕಲ್‌ತೋಟ ಇವರ ಸ್ಮರಣಾರ್ಥ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ

- Advertisement -
- Advertisement -

ವಿಷ್ಣು ಫ್ರೇಂಡ್ಸ್‌‌‌ ಕುಂಡಡ್ಕ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅಮೆಚೂರ್‌‌ ಕಬಡ್ಡಿ ಅಸೋಸಿಯೇಷನ್‌‌ ಬಂಟ್ವಾಳ ತಾಲೂಕು ಕ್ಲಬ್‌‌ ಅಸೋಸಿಯೇಷನ್‌‌ ಇದರ ಸಹಯೋಗದಲ್ಲಿ ಬಂಟ್ವಾಳ ತಾಲೂಕು ನೋಂದಣಿ ತಂಡಗಳ ದಿ|ಉಮೇಶ್‌‌‌ ಅರ್ಕಲ್‌ತೋಟ ಇವರ ಸ್ಮರಣಾರ್ಥ 7ನೇ ವರ್ಷದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟವುನೇ ಶನಿವಾರ ರಾತ್ರಿ 8:00 ಗಂಟೆಗೆ ಗುಣಶ್ರೀ ವಿದ್ಯಾಲಯ ಶಾಲಾ ಮೈದಾನ, ಕುಂಡಡ್ಕ ಇಲ್ಲಿ ನಡೆಯಲಿದೆ.

ರಾತ್ರಿ ನಡೆಯುವ ಸಭಾಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಪುತ್ತೂರು ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಇವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮೈಸೂರು ಎಸ್.ಎಲ್.ವಿ. ಬುಕ್ಸ್ ಪ್ರೈವೆಟ್ ಲಿಮಿಟೆಡ್ ಆಡಳಿತ ನಿರ್ದೇಶಕ ದಿವಾಕರ ದಾಸ್ ನೇರ್ಲಾಜೆ, ವಿಧಾನ ಪರಿಷತ್‌ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ವಿಜಯ ಸಾಮ್ರಾಟ್ (ರಿ.) ಸ್ಥಾಪಾಕಾಧ್ಯಕ್ಷ ಸಹಜ್ ರೈ ಬಳಜ್ಜ, ಪುತ್ತೂರು ಸಿಝರ್ ಗ್ರೂಪ್ ಪ್ರಸನ್ನ ಕುಮಾ‌ರ್ ಶೆಟ್ಟಿ, ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಕಿರಣ್ ಶೆಟ್ಟಿ ಪೆರ್ನೆ, ಜೆಸಿಐ ವಿಟ್ಲ ಅಧ್ಯಕ್ಷ ಸಂತೋಷ್ ಶೆಟ್ಟಿ ಕೆಲಿಂಜ, ಕುಂಡಡ್ಕ ಗುಣಶ್ರೀ ವಿದ್ಯಾಲಯ ಸಂಚಾಲಕ ವೇಣುಗೋಪಾಲ ಶೆಟ್ಟಿ ಮರುವಾಳ, ಪುತ್ತೂರು ನಿಕಟಪೂರ್ವ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಇಡ್ಡಿದು ಸೇವಾ ಸಹಕಾರಿ ಸಂಘ,ನಿ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಪುತ್ತೂರು ಹೊಳ್ಳ ಕ್ರಾಕರ್ಸ್ ಮಾಲಕ ಧರೇಷ್‌ ಹೊಳ್ಳ, ವಿಟ್ಲ ಸಾನ್ವಿ ಕನ್‌ಸ್ಟ್ರಕ್ಷನ್ ತಾರಾನಾಥ ಬೋಳಿಗದ್ದೆ, ಯುವ ಉದ್ಯಮಿ ಧನಂಜಯ ಪಟ್ಲ, ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ವಿಟ್ಲ ಅಧ್ಯಕ್ಷ ನರ್ಸಪ್ಪ ಪೂಜಾರಿ, ವೀರಕಂಭ ಗ್ರಾ.ಪಂ. ಸದಸ್ಯ ಮತ್ತು ಬಂಟ್ವಾಳ ತಾಲೂಕು ಬಿಜೆಪಿ ಯುವಮೋರ್ಚಾ ಸಂದೀಪ್ ಪೂಜಾರಿ ಕೆಲಿಂಜ, ಹಿಂದೂ ಮುಖಂಡ ಅಕ್ಷಯ್ ರಜಪೂತ್ ಕಲ್ಲಡ್ಕ, ವಕೀಲ ಗೋವಿಂದ್ ರಾಜ್ ಪೆರುವಾಜೆ, ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಮಾಡತ್ತಾರು, ಗ್ರಾಮ ಸಹಾಯಕ ಲಿಂಗಪ್ಪ ಗೌಡ ಅರ್ಕಲ್‌ತೋಟ, ಪ್ರಗತಿಪರ ಕೃಷಿಕ ತೀರ್ಥರಾಮ ಗೌಡ ಸೇನರಮಜಲು, ವಿಟ್ಲ ಸಾಯಿಟೌನ್ ಕಿಚನ್ ಮಾಲಕ ದಿವಾಕ‌ರ್ ಶೆಟ್ಟಿ ಅಬೀರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!