- Advertisement -
- Advertisement -
ಚಿಕ್ಕಮಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರ ಪಿಎ ವಿರುದ್ಧ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಲಂಚ ಕೇಳಿದ ಗಂಭೀರ ಆರೋಪಕ್ಕೆ ಸಂಬಂಧಪಟ್ಟಂತೆ ಗಂಗಾಧರ್ ವಿರುದ್ಧ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರು ಶೃಂಗೇರಿಯಲ್ಲಿ ದೂರು ಸಲ್ಲಿಸಿದ್ದರು.ಈ ಕುರಿತ ವಾಟ್ಸ್ಯಾಪ್, ಫೋನ್ ಸಂದೇಶದ ಪ್ರತಿಯನ್ನು ಕೂಡ ದೂರಿನಲ್ಲಿ ಲಗತ್ತಿಸಿದ್ದಾರೆ.
ಇನ್ನು ಕಂದಾಯ ಸಚಿವ ಆರ್.ಆಶೋಕ್ ಈಗಾಗಲೇ ಪಿಎ ಸ್ಥಾನದಿಂದ ಗಂಗಾಧರ್ ಅವರನ್ನು ಅಮಾನತು ಮಾಡಿದ್ದಾರೆ.
- Advertisement -