- Advertisement -
- Advertisement -

ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಬುಧವಾರ ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮವು ಅತ್ಯಂತ ಶ್ರದ್ಧೆ ಭಕ್ತಿಯಿಂದ ಜರಗಿತು. ಇಂತಹ ಕಾರ್ಯಕ್ರಮದಲ್ಲಿ ಹನುಮ ಮಾಲಾಧಾರಿಯೊಬ್ಬ ಉಗ್ರ ಲಾರೆನ್ಸ್ ಬಿಟ್ಟೋಯ್ ನ ಫೋಟೋ ಹಿಡಿದು “ಲಾರೆನ್ಸ್ ಗೆ ಜಯವಾಗಲಿ”, “ಭಜರಂಗಬಲಿ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ”, “ನಾನು ಬಿಷ್ಟೋಯ್ ಅಭಿಮಾನಿ” ಎಂದು ಘೋಷಣೆ ಕೂಗುತ್ತಾ ಬೆಟ್ಟ ಹತ್ತುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಲಾರೆನ್ಸ್ ಬಿಷ್ಟೋಯ್ ನ ಫೋಟೋ ಹಿಡಿದ ಮಾಲಧಾರಿ ಬೆಳಗಾವಿಯ ರಾಜು ಕೋಳಿವಾಡ ಎಂದು ತಿಳಿದು ಬಂದಿದೆ. ಫೋಟೋ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಿಟ್ಟೋಯ್ ಅಭಿಮಾನಿ ರಾಜು ಕೋಳಿವಾಡ ಕುರಿತು ಅಂಜನಾದ್ರಿಯಲ್ಲಿರುವ ಸಿಸಿ ಕ್ಯಾಮರಾ ವಿಡಿಯೋಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.



- Advertisement -








