- Advertisement -
- Advertisement -
ಪುತ್ತೂರು: ಕೇರಳದ ಲಾಟರಿಯಲ್ಲಿ ಉಪ್ಪಿನಂಗಡಿಯ ಮೇಸ್ತ್ರಿಗೆ ಅದೃಷ್ಟ ಒಲಿದು ಬಂದಿದೆ. ಇಳಂತಿಲ ನಿವಾಸಿ ಚಂದ್ರಯ್ಯ ಎಂಬವರೇ ಲಾಟರಿಯಲ್ಲಿ 50 ಲಕ್ಷ ರೂ.ಬಹುಮಾನ ಗೆದ್ದುಕೊಂಡವರು.
ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿರುವ ಕೂಲಿ ಕಾರ್ಮಿಕರಾಗಿರುವ ಇವರು ಕಾನತ್ತೂರು ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕಾಸರಗೋಡಿನಲ್ಲಿರುವ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಗೆ ಭೇಟಿ ಕೊಟ್ಟು ಅಲ್ಲಿಂದ 500 ಬೆಲೆಯ ಸೆ.20 ರಂದು ಡ್ರಾ ಇದ್ದ ಓಣಂ ಬಂಪರ್ ಲಾಟರಿ ಟಿಕೇಟ್ ಖರೀದಿಸಿದ್ದಾರೆ.
ಇವರು ಖರೀದಿಸಿದ ಟಿಕೇಟ್ಗೆ ಬಂಪರ್ ಬಹುಮಾನವಾಗಿ 50ಲಕ್ಷ ರೂ. ಬಂದಿದೆ.
- Advertisement -