Thursday, April 25, 2024
spot_imgspot_img
spot_imgspot_img

ಮಡಿಕೇರಿ: ಗ್ರಾಮದಲ್ಲಿ ವಾಮಾಚಾರ ಮಾಡಿದ ಕುಡಿಕೆ ಪತ್ತೆ- ಆತಂಕದಲ್ಲಿ ಗ್ರಾಮದ ಜನತೆ!

- Advertisement -G L Acharya panikkar
- Advertisement -

ಮಡಿಕೇರಿ: ಕುಡಿಕೆಯೊಂದರಲ್ಲಿ ವಾಮಾಚಾರ ಮಾಡಿ ಗ್ರಾಮದಲ್ಲಿ ತಂದಿಟ್ಟಿರುವುದನ್ನು ಗಮನಿಸಿದ ಗ್ರಾಮಸ್ಥರು ಅತಂಕ ಒಳಗಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ನಡೆದಿದೆ.

ಗುಹ್ಯ ಗ್ರಾಮದಲ್ಲಿ ರಾತ್ರಿ ಗ್ರಾಮದ ಮೂರು ರಸ್ತೆಗಳು ಸೇರುವ ಜಾಗದಲ್ಲಿ ವಾಮಾಚಾರ ಮಾಡಿ, ರಸ್ತೆಯಲ್ಲಿ ಕುಡಿಕೆಗೆ ಕೆಂಪು ಬಟ್ಟೆ ಕಟ್ಟಿ ಇಟ್ಟ ಕಿಡಿಗೇಡಿಗಳು ಅಲ್ಲಿಂದ ತೆರಳಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಇದೀಗ ಅತಂಕ ಒಳಗಾಗಿದ್ದಾರೆ.

ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವಾಮಾಚಾರ ಅಗಿದ್ದು, ಇದರಿಂದ ಗ್ರಾಮದ ಜನತೆ ಅತಂಕಗೊಂಡಿದ್ದಾರೆ. ಯಾರೋ ಈ ರೀತಿಯಲ್ಲಿ ಗ್ರಾಮದ ರಸ್ತೆಯಲ್ಲಿ ಮಡಿಕೆ ಇಟ್ಟಿದ್ದಾರೆ. ಆದರೆ ಇದು ವಾಮಾಚಾರ ಮಾಡಿರುವುದಾ ಎಂಬುದು ಇನ್ನು ಖಚಿತವಾಗಿ ತಿಳಿದಿಲ್ಲ. ಆದರೆ ಇದರಿಂದ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!