ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಹೈಕೋರ್ಟ್ ಮತ್ತೆ ಗರಂ ಆದ ಘಟನೆ ನಡೆದಿತ್ತು. ನ್ಯಾಯಾಂಗ ನಿಂದನೆ ಅರ್ಜಿ ಸಂಬಂದಿಸಿದಂತೆ ಹೈ ಕೋರ್ಟು 2020 ಆದೇಶ ಮಾಡಿದ ನ್ಯಾಯ ಮೂರ್ತಿಗಳನ್ನು ಅವಾಚ್ಯವಾಗಿ ನಿಂದಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ನಡತೆ ಬಗ್ಗೆ ತಿಮರೋಡಿ ಪರ ವಕೀಲರು ಹೈ ಕೋರ್ಟಿನಲ್ಲಿ ತಿಮರೋಡಿ ಆ ಹೇಳಿಕೆ ಸರಿಯಲ್ಲ ಮತ್ತು ಈ ಬಗ್ಗೆ ಅವರಿಗೆ ಈ ರೀತಿ ಮಾಡದಂತೆ ತಿಳಿ ಹೇಳುವುದಾಗಿ ನ್ಯಾಯಾಲಯದ ಜವಾಬ್ದಾರಿ ನ್ಯಾಯವಾದಿಯಾಗಿ ಹೇಳಿಕೆಯನ್ನು ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಅವರನ್ನು ನ್ಯಾಯಾಲಯದ ಮುಂದೆ ಇದೇ ಜನವರಿ 05 ರಂದು ಅಂದರೆ ಇಂದು ಖುದ್ದು ಹಾಜರಾಗಲು ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿಗೆ ಹೈ ಕೋರ್ಟ್ ಆದೇಶ ಮಾಡಿತ್ತು. ಈ ಆದೇಶದಂತೆ ಇಂದು ಆರೋಪಿ ತಿಮರೋಡಿ ಪತ್ನಿ ಸಹಿತ ಕೋರ್ಟಿಗೆ ಹಾಜರಾಗಿದ್ದಾನೆ.
ಹಿರಿಯ ನ್ಯಾಯ ಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಹಾಗೂ ಟಿ. ಜಿ. ಶಿವಶಂಕರೇ ಗೌಡ ಅವರ ನ್ಯಾಯಪೀಠ ಮುಂದಿನ ಗುರುವಾರಕ್ಕೆ (ಜ. 11) ಮರು ಹಾಜರಾತಿಗೆ ಸೂಚಿಸಿ ಆದೇಶ ಮಾಡಿದೆ. ದೂರು ದಾರದ ಪರ ಖ್ಯಾತ ಹಿರಿಯ ನ್ಯಾಯವಾದಿಗಳಾದ ಚಂದ್ರನಾಥ ಆರಿಗಾ ಅವರು ವಾದಿಸಿದರು.