- Advertisement -
- Advertisement -
ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ವತಿಯಿಂದ ಸಂಸ್ಥೆಯ ಅಧ್ಯಕ್ಷರು, ಉದ್ಘಾಟಕರು ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಪುತ್ತೂರಿನ ಮಲ್ಲಿಕಾ ಜೆ ರೈ ಗುಂಡ್ಯಡ್ಕ ಇವರಿಗೆ ಭಾವೈಕ್ಯತಾ ಕಾವ್ಯ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಂಗಳೂರಿನ ಮರಿಯಾ ಜಯಂತಿ ಸಭಾಂಗಣದಲ್ಲಿ ನಡೆದ ಭಾವೈಕ್ಯ ಸಮ್ಮೇಳನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಲ್ಲಿಕಾ ಜೆ ರೈ ಯವರು ಮಂಗಳೂರು ವಿಶ್ವವಿದ್ಯಾನಿಲಯದ ತುಳು ಸ್ನಾತಕೋತ್ತರ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನೊಂದಿಗೆ 6ನೇ ರಾಂಕ್ ಪಡೆದಿದ್ದಾರೆ. ತುಳು ಕನ್ನಡ ಕವಯಿತ್ರಿಯಾಗಿರುವ ಮಲ್ಲಿಕಾ ಜೆ ರೈಯವರು ಅಂಕಣಕಾರರಾಗಿ ಪ್ರವೃತ್ತಿಯಲ್ಲಿದ್ದಾರೆ.
- Advertisement -