- Advertisement -
- Advertisement -
ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮಂಗಳೂರು ತಾಲೂಕಿನ ಬೊಂಡಂತಿಲ ಗ್ರಾಮದ ವಾಸು ಮುಕಾರಿ ಗುರುವ ಮುಕಾರಿ ಮನೆಯ ಬಳಿ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ವೈ ಭರತ್ ಶೆಟ್ಟಿ ಯವರು ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸಚಿನ್ ಹೆಗ್ಡೆ,ಶಕ್ತಿ ಕೇಂದ್ರ ಪ್ರಮುಖರಾದ ಯಶ್ವಿನ್ ಎನ್ ಕುಂದರ್,ಮಂಡಲ ಕಾರ್ಯಕಾರಿಣಿ ಸದಸ್ಯರಾದ ಗೋಕುಲ್ ದಾಸ್ ಶೆಟ್ಟಿ ಎಸ್ಸಿ ಮೋರ್ಚಾದ ಉಪಾಧ್ಯಕ್ಷರಾದ ಮೋನಪ್ಪ ಮಾಸ್ಟರ್,ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್ ಉಗ್ಗಾಕೊಡಿ ಹರೀಶ್ ಹೊಸಮನೆ ಮೀನಾಕ್ಷಿ ಕೊಂಬೆಲ್ ಬೂತ್ ಕಾರ್ಯದರ್ಶಿಯಾದ ಸತೀಶ್ ಉಗ್ಗಕೋಡಿ ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -