ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ) ವತಿಯಿಂದ ಅನಾರೋಗ್ಯ ಪೀಡಿತರಿಗೆ ಸ್ಪಂದನ ಸಹಾಯ ಹಸ್ತ ನೀಡುವ ಕಾರ್ಯಕ್ರಮದಲ್ಲಿ ಅನಾರೋಗ್ಯ ಪೀಡಿತ 3 ಕುಟುಂಬಗಳಿಗೆ 1.5 ಲಕ್ಷದ ಚೆಕ್ ವಿತರಿಸಲಾಯಿತು.
ಶಾಸಕರಾದ ಡಾ.ಭರತ್ ಶೆಟ್ಟಿ ವೈ., ವೇದವ್ಯಾಸ ಕಾಮತ್ , ಮೇಯರ್ ದಿವಾಕರ್ ಪಾಂಡೇಶ್ವರ್, ಬಿರುವೆರ್ ಕುಡ್ಲ(ರಿ) ಸಂಸ್ಥೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಭಾಗ್, ಅಧ್ಯಕ್ಷರಾದ ರಾಕೇಶ್ ಪೂಜಾರಿ ಉಪಸ್ಥಿತಿಯಲ್ಲಿ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕುದ್ರೋಳಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್ ಸಾಯಿ ರಾಮ್, ಮೂಡ ಅಧ್ಯಕ್ಷ ರವಿಶಂಕರ್ ಮಿಜಾರ್, ರವೀಂದ್ರ ನಿಕಮ್, ಲತೀಶ್ ಬಲ್ಲಾಳ್ ಭಾಗ್, ಬಾಬಾ ಅಲಂಕಾರ್, ಸೂರಜ್ ಕಲ್ಯ, ಲಿಖಿತ್ ಕೋಟ್ಯಾನ್, ಲೋಹಿತ್ ಗಟ್ಟಿ, ರೆನಿತ್ ರಾಜ್ ಅಶೋಕ್ ನಗರ, ಮನೋಜ್ ಶೆಟ್ಟಿ, ರಾಕೇಶ್ ಸಾಲಿಯಾನ್, ಅಮಿತ್ ರಾಜ್, ರಾಮ್ ಎಕ್ಕೂರು, ವಾಝಿ ಪದವಿನಂಗಡಿ, ಅಶ್ರಫ್ ಆಲಿ ಕಾರ್ಕಳ,ದಿನಿಲ್ ಬಲ್ಲಾಳ್ ಭಾಗ್,ಸುರೇಶ್ ಬಲ್ಲಾಳ್ ಭಾಗ್,ರೋಷನ್ ಬಲ್ಲಾಳ್ ಭಾಗ್, ಕಿಶೋರ್ ಬಾಬು ಕೋಡಿಕಲ್, ಪ್ರಾಣೇಶ್ ಬಂಗೇರ, ಕಿರಣ್ ಉರ್ವ, ಯಶ್ವಿನ್ ಪೂಜಾರಿ, ರಕ್ಷಿತ್ ಮೂಲ್ಕಿ ಮುಂತಾದ ಪ್ರಮುಖ ಸದಸ್ಯರು ಮತ್ತು ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.