- Advertisement -
- Advertisement -
ಕನ್ಯಾನ ಗ್ರಾಮದ ಮಕ್ಕುರಿ ಎಂಬಲ್ಲಿ ಹೊಸ ವಿದ್ಯುತ್ ಪರಿವರ್ತಕದ ನಿರ್ಮಾಣಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡ್ಡಿಗುತ್ತು ಇವರ ಆದೇಶಕ್ಕೆ ಮೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಪಂದಿಸಿದರು.
ಕನ್ಯಾನ ಮೆಸ್ಕಾಂ ಶಾಖಾಧಿಕಾರಿ ಸತೀಶ್ ಇವರ ಉಪಸ್ಥಿತಿಯಲ್ಲಿ ಅ.22ರಂದು ಮಕ್ಕುರಿಯಲ್ಲಿ ಬಿಜೆಪಿ ಕೊಳ್ನಾಡು ಶಕ್ತಿ ಕೇಂದ್ರದ ಅದ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು ಮತ್ತು ಬಿಜೆಪಿ ಮುಖಂಡ ಹಾಗೂ ಪಂಚಾಯತ್ ಸದಸ್ಯರಾದ ಕೆ.ಪಿ ರಘರಾಮಶೆಟ್ಟಿ ಚಾಲನೆ ನೀಡಿದರು. ವಿದ್ಯುತ್ ಗುತ್ತಿಗೆದಾರರಾದ ಕೆ.ಕೃಷ್ಣ ಬನಾರಿ ಕಾಮಗಾರಿಯನ್ನು ನಿರ್ವಹಿಸಿದರು.
ಗ್ರಾಮ ಪಂಚಾಯತ್ ಸದಸ್ಯ ಮನೋಜ್ ಕುಮಾರ್ ಬನಾರಿ, ಕನ್ಯಾನ ಪವರ್ ಮ್ಯಾನ್ ಶಿವ ಬೆಳ್ಚಾಡ, ರಮೇಶ್ ಮಕ್ಕುರಿ, ರಮೇಶ್ ಒಡಿಯೂರ್, ಸದ್ರಿ ಪರಿವರ್ತಕದ ಬಳಕೆದಾರರು ಸ್ಥಳದಲ್ಲಿ ಉಪಸ್ಥಿತರಿದ್ದರು.
- Advertisement -