Thursday, April 25, 2024
spot_imgspot_img
spot_imgspot_img

ಮಂಗಳೂರು: ಬಸ್ ಚಲಾಯಿಸುತ್ತಿದ್ದ ವೇಳೆ ಲೋ ಬಿಪಿಯಾಗಿ ಕುಸಿದು ಬಿದ್ದ ಚಾಲಕ!

- Advertisement -G L Acharya panikkar
- Advertisement -

ಮಂಗಳೂರು: ಬಸ್ ಚಲಾಯಿಸುತ್ತಿರುವ ವೇಳೆ ಚಾಲಕನಿಗೆ ತಲೆನೋವು ಮತ್ತು ಲೋ ಬಿಪಿ ಆಗಿ ಚಾಲಕ ಕುಸಿದು ಬಿದ್ದ ಘಟನೆ ನಗರದ ಹೊರವಲಯ ಅಡ್ಯಾರ್‌ನಲ್ಲಿ ನಡೆದಿದೆ.

ಪ್ರಯಾಣಿಕರಿಂದ ತುಂಬಿ ತುಳುಕಿದ್ದ ಬಸ್ ಪುತ್ತೂರಿನಿಂದ ಮಂಗಳೂರಿನ ಸ್ಟೇಟ್‌ ಬ್ಯಾಂಕಿಗೆ ತೆರಳಿತ್ತು ಇನ್ನಲಾಗಿದೆ. ಸೇಫ್ ವೇ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಅಡ್ಯಾರ್ ತಲುಪುತ್ತಿದ್ದಂತೆ ಈ ಘಟನೆ ನಡೆದಿದೆ. ಚಾಲಕನಿಗೆ ಕಣ್ಣು ಮಂಜಾಗಿದ್ದು ತಕ್ಷಣ ಬಸ್ ನಿಲ್ಲಿಸಿದ್ದಾನೆ ಇದರಿಂದಾಗಿ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಚಾಲಕನಿಗೆ ಕಣ್ಣು ಮಂಜಾಗುತ್ತಲೇ ಬಸ್ ಹೆದ್ದಾರಿ ಬದಿಯ ಸಹ್ಯಾದ್ರಿ ಕಾಲೇಜಿನ ಗೇಟ್ ಮುಂಭಾಗದಲ್ಲಿ ನಿಂತಿರುವುದು ಪವಾಡ ಎನಿಸಿದೆ.

ಬಸ್ ಚಾಲಕ ಪುತ್ತೂರು ಮೂಲದ ಸಂತೋಷ್ ಎಂಬಾತನಾಗಿದ್ದು ಕೂಡಲೇ ಸ್ಥಳೀಯರು ಮತ್ತು ಇತರೇ ಪ್ರಯಾಣಿಕರು ಸೇರಿ ಚಾಲಕನನ್ನು ಸ್ಟೇರಿಂಗ್ ಎಡೆಯಿಂದ ಹೊರಗೆ ಎಳೆದಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಕರು ತುಂಬಿ ತುಳುಕ್ಕಿದ್ದ ದೃಶ್ಯ ಕಂಡುಬಂದಿದೆ. ಚಾಲಕನಿಗೆ ಕಣ್ಣು ಮಂಜಾಗುತ್ತಿದ್ದಂತೆ ಬಸ್ಸಿನ ಬ್ರೇಕ್ ಅದುಮಿದ್ದು ಸ್ಟಾಪ್ ಬಟನ್ ಒತ್ತಿದ್ದಾನೆ. ಬಸ್ಸಿನಲ್ಲಿದ್ದ ಹಲವಾರು ಜನ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಜೀವ ಉಳಿದಿದ್ದೇ ಹೆಚ್ಚು ಅಂತಾ ಪ್ರಯಾಣಿಕರು ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಚಾಲಕ ಸಂತೋಷ್ ಒಂದು ವರ್ಷದಿಂದ ಇದೇ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಸ್ ಕೂಡ ವೇಗವಾಗಿಯೇ ಇತ್ತು. ಆದರೆ, ಚಾಲಕನ ಚಾಕಚಕ್ಯತೆಯಿಂದ ದುರಂತ ತಪ್ಪಿ ಹೋಗಿದೆ ಎಂದು ಬಸ್ಸಿನ ನಿರ್ವಾಹಕ ಶೇಖರ್ ಹೇಳಿದ್ದಾರೆ.

- Advertisement -

Related news

error: Content is protected !!