Wednesday, April 24, 2024
spot_imgspot_img
spot_imgspot_img

ಸಮಾಜದ ಸ್ವಾಸ್ಥ್ಯ ಹಾಳುಗೆಡವಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳ ಶೀಘ್ರ ಬಂಧನವಾಗದಿದ್ದಲ್ಲಿ ಉಗ್ರ ಹೋರಾಟ- ಮಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಮ್.ರವೂಫ್

- Advertisement -G L Acharya panikkar
- Advertisement -

ಮಂಗಳೂರು: ನಗರದಲ್ಲಿ ಕೋಮು ಪ್ರಚೋದನಕಾರಿ ಗೋಡೆ ಬರಹಗಳು ರಾಜ್ಯ ಸರಕಾರದ ಆಡಳಿತ ವೈಫಲ್ಯಗಳನ್ನು ಮರೆಮಾಚಿ ಮಾಧ್ಯಮಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ವ್ಯವಸ್ಥಿತ ಪಿತೂರಿಯಂತೆ ಸಂಶಯ ಮೂಡುತ್ತಿದೆ ಹಾಗೂ ಇಂತಹ ಬರಹಗಳನ್ನು ಬರೆದು ಸಮಾಜದ ಶಾಂತಿ ಕೆಡವಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳನ್ನು ಪೋಲಿಸ್ ಇಲಾಖೆ ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕಾಗಿ ವಿನಂತಿಯನ್ನು ಮಾಡುತ್ತಿದ್ದು.

ಕೋಮು ಪ್ರಚೋದನಕಾರಿ ಕೃತ್ಯಗಳನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಹಾಗೂ ಆರೋಪಿಗಳ ಶೀಘ್ರ ಬಂಧನವಾಗದಿದ್ದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಮಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಮ್.ರವೂಫ್ ಸರಕಾರಕ್ಕೆ ಎಚ್ಚರಿಸಿದರು.

- Advertisement -

Related news

error: Content is protected !!