- Advertisement -
- Advertisement -
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಚುಕೋರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ದೆಹಲಿಯಲ್ಲಿ ಬಂದಿಸಿದೆ.
ಕರ್ನಾಟಕದ ಶಿವಮೊಗ್ಗ ಮೂಲದ ನಿವಾಸಿ ಅರಾಫತ್ ಅಲಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಭಾರತದಲ್ಲಿ ಭಯೋತ್ದಾದಕ ಕೃತ್ಯಗಳನ್ನು ನಡೆಸುವ ವಿದೇಶಿ ಮೂಲದ ಇಸ್ಲಾಮಿಕ್ ಸ್ಪೇಟ್ ಸಂಚು ವಿಫಲಗೊಳಿಸುವಲ್ಲಿ ಇಂದು ಮಹತ್ವದ ಹೆಜ್ಜೆಯಾಗಿದೆ ಎಂದು ಎನ್ ಐಎ ಹೇಳಿದೆ.
ಆರೋಪಿ ಅರಾಫತ್ ಅಲಿ 2020ರಿಂದ ಐಸಿಸ್ ಮೂಲಕ ಭಯೋತ್ಪಾದಕ ಕೃತ್ಯ ಯೋಜಿಸಿದ್ದು, ಅಂದಿನಿಂದ ಈತನು ತಲೆಮರೆಸಿಕೊಂಡಿದ್ದನು. ಈತ ಐಸಿಸ್ ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾಗೆ ಕುಮ್ಮಕ್ಕು ನೀಡಲು ವಿದೇಶದಿಂದಲೇ ಕೆಲಸ ಮಾಡುತ್ತಿದ್ದ ಎಂದು ಸಿಬಿಐ ವಕ್ತಾರರು ಹೇಳಿದರು. ಅರಾಫತ್ ಅಲಿ ಆರೋಪಿಯನ್ನು ಕೀನ್ಯಾದ ನೈರೋಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಬಂಧಿಸಿದ್ದಾರೆ.
- Advertisement -