Saturday, May 4, 2024
spot_imgspot_img
spot_imgspot_img

ಮಂಗಳೂರು: ಲಿಂಬೆ ಹಣ್ಣಿನ ಟ್ರೇಗಳ ನಡುವೆ ಗಾಂಜಾ ಸಾಗಾಟ ಪತ್ತೆ; ಇಬ್ಬರ ಬಂಧನ!

- Advertisement -G L Acharya panikkar
- Advertisement -

ಮಂಗಳೂರು: ಬುಲೆರೋ ವಾಹನದಲ್ಲಿ ಲಿಂಬೆ ಹಣ್ಣಿನ ಟ್ರೇಗಳ ನಡುವೆ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿ 40 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಜುಲೈ 2ರಂದು ಕೊಟ್ಟರಾ ಚೌಕಿ ಬಳಿ ಉರ್ವಾ ಠಾಣೆ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟೆಯವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಉಡುಪಿ ಕಡೆಯಿಂದ ಬಂದ ಬುಲೆರೋ ವಾಹನದಲ್ಲಿ ಪ್ಲಾಸ್ಟಿಕ್ ಟ್ರೇಗಳಲ್ಲಿ ಲಿಂಬೆ ಹಣ್ಣು ತುಂಬಿ ಅದರ ಮಧ್ಯೆ ತಲಾ ಎರಡು ಕೆಜಿ ತೂಕದ ಚೀಲಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು.

ಕಾಸರಗೋಡಿನ ಕಂಬಲ್ಲೂರಿನ ಶಿಹಾಬುದ್ದೀನ್.ವಿ.ವಿ(32) ಮತ್ತು ಲತೀಫ್ (38) ಪ್ರಕರಣದ ಆರೋಪಿಗಳಾಗಿದ್ದಾರೆ. ತಲಾ ಎರಡು ಕೆಜಿ ತೂಕದ 20 ಗಾಂಜಾ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಬಳಸಿದ ಬೊಲೆರೋ ವಾಹನ ಸೇರಿ ಒಟ್ಟು 11,17,000 ರೂ ಮೊತ್ತದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!