Sunday, June 29, 2025
spot_imgspot_img
spot_imgspot_img

ಮಂಗಳೂರು: ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ; ಓರ್ವ ಮೃತ್ಯು

- Advertisement -
- Advertisement -

ಮಂಗಳೂರು: ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸಾವನಪ್ಪಿದ ಘಟನೆ ಗುರುಪುರ ಸರಕಾರಿ ಕಾಲೇಜು ಬಳಿ ನಡೆದಿದೆ. ಮೃತರನ್ನು ಅಡ್ಡೂರು ಕಾಂಜರಕೋಡಿ ಮಸೀದಿ ಬಳಿಯ ನಿವಾಸಿ ಡಿ.ಎಸ್.‌ ಅಬ್ದುಲ್‌ ರಹೀಮ್‌ (62) ತಿಳಿದು ಬಂದಿದೆ.

ರಹೀಮ್‌ ಅವರು ಮಂಗಳೂರಿನಿಂದ ಕೈಕಂಬಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬೈಕ್ ಸವಾರನೊಬ್ಬ ಓವರ್ ಟೇಕ್ ಮಾಡುವ ರಭಸದಲ್ಲಿ ರಹೀಮ್ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ದ್ವಿಚಕ್ರ ವಾಹನ ಬ್ಯಾಲೆನ್ಸ್ ತಪ್ಪಿ ಎದುರಿಗೆ ಬರುತ್ತಿದ್ದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ರಹೀಮ್ ಅವರಿಗೆ ಗಂಭೀರ ಗಾಯಗಳಾಗಿತ್ತು, ತಕ್ಷಣ ಸ್ಥಳೀಯರು ಮತ್ತು ಸಹ ವಾಹನ ಸವಾರರು ಅಬ್ದುಲ್‌ ರಹೀಮ್‌ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ದಾರಿಮಧ್ಯೆ ಅವರು ಮೃತ ಪಟ್ಟರೆಂದು ತಿಳಿದು ಬಂದಿದೆ.

- Advertisement -

Related news

error: Content is protected !!