- Advertisement -
- Advertisement -
ಮಂಗಳೂರು: ಫ್ರೀ ಯಾಗಿ ಸಿಗರೇಟು ನೀಡಲಿಲ್ಲ ಎಂಬ ಕಾರಣಕ್ಕೆ ಅನ್ಯಕೋಮಿನ ಯುವಕನಿಂದ ಹಿಂದೂ ಯುವಕನಿಗೆ ಹಲ್ಲೆ ನಡೆಸಿ ,ತಂದೆ ಮತ್ತು ಇಬ್ಬರು ಮಕ್ಕಳಿಗೆ ಬೆನ್ನತ್ತಿಕ್ಕೊಂಡು ಚೂರಿ ಹಾಕಲು ಯತ್ನಿಸಿದ ಆತಂಕಕಾರಿ ಘಟನೆ ಕಂಕನಾಡಿ ಬಳಿ ನಡೆದಿದೆ.
ಆರೋಪಿ ಮುಸ್ಲಿಂ ಯುವಕನನ್ನು ಸ್ಥಳೀಯ ಯುವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗೂ ಕೂಡ ಅಲ್ಪ ಸ್ವಲ್ಪ ಗಾಯಗಳಗಿದ್ದು ವೆನ್ಲೋಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳು ಯುವಕನನ್ನು ವೆನ್ಲೋಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುದ್ದಿ ಕೇಳಿ ಆಸ್ಪತ್ರೆಗೆ ಬಂದ ಬಜರಂಗದಳ ಕಾರ್ಯಕರ್ತರು ಆಸ್ಪತ್ರೆ ಒಳಗಡೆ ಇದ್ದ ಆರೋಪಿಗೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ವೆನ್ಲೋಕ್ ಆಸ್ಪತ್ರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕಂಕನಾಡಿ ಶಾಲಿಮಾರ್ ಕಾಂಪ್ಲೆಕ್ಸ್ ಸಮೀಪ ಗಾಂಜಾ ಅಡ್ಡೆ ಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
- Advertisement -