- Advertisement -
- Advertisement -
ಮಂಗಳೂರು(ಅ.29): ಮುಲ್ಕಿಯ 55 ವರ್ಷದ ವ್ಯಕ್ತಿಯೊಬ್ಬ ತಾನು ಮನೆಗೆ ತಂದು ತಿನ್ನುತ್ತಿದ್ದ ಗೋಲಿಬಜೆ ಗಂಟಲಿನಲ್ಲಿ ಸಿಲುಕಿಕೊಂಡಿದ್ದರ ಪರಿಣಾಮ ಪ್ರಾಣ ಕಳೆದುಕೊಂಡಿರುವ ಬಗ್ಗೆ ಮರಣೋತ್ತರ ವರದಿ ಲಭ್ಯವಾಗಿದೆ.
ಮೃತ ವ್ಯಕ್ತಿಯನ್ನು ಹರೀಶ್ ರಾಮಪ್ಪ ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ರಾಮಪ್ಪ ಮುಲ್ಕಿಯಲ್ಲಿ ತನ್ನ ಅಕ್ಕನೊಂದಿಗೆ ಉಳಿದುಕೊಂಡಿದ್ದ. ಕೆಲಸದಿಂದ ಮನೆಗೆ ಹಿಂದಿರುಗುವಾಗ ಗೋಲಿಬಜೆಯನ್ನು ರೆಸ್ಟೋರೆಂಟ್ನಿಂದ ಖರೀದಿಸಿ ತಂದಿದ್ದ. ಮನೆಯಲ್ಲಿ ಅವನು ಅದನ್ನು ತಿನ್ನುತ್ತಿದ್ದಾಗ ಒಂದು ಅವನ ಗಂಟಲಿನಲ್ಲಿ ಸಿಲುಕಿಕೊಂಡಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಆತ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಸಾವಿನ ಕಾರಣದ ಅನುಮಾನದ ನಂತರ ಮರಣೋತ್ತರ ಪರೀಕ್ಷೆಯನ್ನು ಸಹ ನಡೆಸಲಾಯಿತು ಮತ್ತು ವರದಿಯಲ್ಲಿ ಗೋಲಿಬಜೆ ತುಣುಕು ಅವನ ಗಂಟಲಿನಲ್ಲಿ ಸಿಲುಕಿಕೊಂಡಿದೆ ಮತ್ತು ಅವನ ಸಾವಿಗೆ ಅದೇ ಕಾರಣವಾಯಿತು ಎಂದು ತಿಳಿಸಿದೆ.
- Advertisement -