- Advertisement -
- Advertisement -
ಮಂಗಳೂರು: ಇಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಸಂವಿಧಾನ ದೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸಂಜೆ.4 ಗಂಟೆಗೆ ಎಸ್ ಡಿಪಿಐ ವತಿಯಿಂದ ಸಂವಿಧಾನ ದೀಕ್ಷೆ ನಡೆಯಲಿದೆ. ದೀಕ್ಷೆ ವೇಳೆ ಜಾತ್ಯಾತೀತತೆ , ಪ್ರಜಾಪ್ರಭುತ್ವ, ಮಾನವ ಹಕ್ಕುಗಳ ರಕ್ಷಣೆಗೆ ಪ್ರತಿಜ್ಞೆ ನಡೆಯಲಿದೆ.
ತ್ರಿಶೂಲ ದೀಕ್ಷೆ ಮೂಲಕ ಸಂದೇಶವನ್ನು ರವಾನೆ ಮಾಡಿದ್ದ ಸಂಘಪರಿವಾರಕ್ಕೆ ಎಸ್ ಡಿಪಿಐ ಸಂವಿಧಾನ ದೀಕ್ಷೆ ಮೂಲಕ ಸಂದೇಶ ರವಾನಿಸಲಿದೆ ಎಂದು ಸಂಘಟನೆ ಮೂಲದಿಂದ ತಿಳಿದು ಬಂದಿದೆ.
- Advertisement -