- Advertisement -
- Advertisement -
ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಸಂಚರಿಸುತ್ತಿದ್ದ ಕಾರನ್ನು ಹಿಂಬಾಲಿಸಿದ್ದ ಬೈಕ್ ಸವಾರನನ್ನು ಪೋಲೀಸರು ಬಂಧಿಸಿದ್ದಾರೆ.ಅನೀಶ್ ಪೂಜಾರಿ ಬಂಧಿತ ವ್ಯಕ್ತಿಯಾಗಿದ್ದು ಪೋಲೀಸರು ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಈತ ನಿನ್ನೆ ಯು.ಟಿ ಖಾದರ್ ವಿಮಾನ ನಿಲ್ದಾಣ ಮಾರ್ಗವಾಗಿ ತೆರಳುತ್ತಿರುವಾಗ ಮಂಗಳೂರು ಹೊರವಲಯದ ದೇರಳಕಟ್ಟೆಯಿಂದ ನಂತೂರು ಜಂಕ್ಷನ್ವರೆಗೆ ಹಿಂಬಾಲಿಸಿದ್ದಾನೆ. ಇದನ್ನು ಗಮನಿಸಿದ ಎಸ್ಕಾರ್ಟ್ನಲ್ಲಿದ್ದ ಪೊಲೀಸರು, ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಬೈಕ್ ಸವಾರ ನಂತೂರು ಸರ್ಕಲ್ನಲ್ಲಿ ರಾಂಗ್ ಸೈಡ್ನಲ್ಲಿ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದ ಎನ್ನಲಾಗಿದೆ.
- Advertisement -