Friday, April 26, 2024
spot_imgspot_img
spot_imgspot_img

ಜಪ್ಪಿನಮೊಗರು ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಕಾಮತ್

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅದ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆಯವರು ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು ಜಪ್ಪಿನಮೊಗರು ವಾರ್ಡಿನ ಅಭಿವೃದ್ಧಿಗೆ ಶಾಸಕನಾಗಿ ನಾನು ಬದ್ಧನಾಗಿದ್ದೇನೆ. ವಿವಿಧ ಇಲಾಖೆಗಳ ಅನುದಾನ ಜೋಡಿಸಿ ತುರ್ತು ಆಗಬೇಕಿರುವ ಕಾಮಗಾರಿಗಳಿಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಸಹಕಾರ ನೀಡಬೇಕೆಂದು ಅದ್ಯಕ್ಷರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಮೇಯರ್ ವೇದವತಿ, ಕಾರ್ಪೊರೇಟರ್ ವೀಣಾ ಮಂಗಳ, ಬಿಜೆಪಿ ಮುಖಂಡರಾದ ಜಿ. ಸುರೇಂದ್ರ, ಕಿರಣ್ ರೈ, ಸುಜಾತ, ಸವಿತಾ ಶೆಟ್ಟಿ, ಸಂದೇಶ್ ಶೆಟ್ಟಿ, ದೀಪಕ್,ಸುಕೇಶ್ ಭರತ್ ರಾಜ್ ಶೆಟ್ಟಿ ಪ್ರವೀಣ್ ಕುಮಾರ್ ಸುಪ್ರೀಂ ಡಿಸೋಜಾ ಹರೀಶ್ ಬೆನಕ ಶ್ರೀಧರ್ ಶೆಟ್ಟಿ ಸಚಿನ್ ರೈ ಪವನ್ ರಾಜ್ ಶೆಟ್ಟಿ ಸಂತೋಷ್ , ಉದಯ್,ರಾಮ್ ಪ್ರಸಾದ್, ಸ್ಥಳೀಯರಾದ ವಿನ್ಸೆಂಟ್ ಡಿಸೋಜಾ ನಾಗೇಂದ್ರ ಗಣೇಶ್ ಶೆಟ್ಟಿ ಸತೀಶ್ ಅಡಪ ಲೋಹಿತ್ ಶೆಟ್ಟಿ,ಅಧಿಕಾರಿ ವರ್ಗದವರು ಹಾಗೂ ಬಿಜೆಪಿ ಬೂತಿನ ಅಧ್ಯಕ್ಷ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!