- Advertisement -
- Advertisement -
ಮಂಗಳೂರು: ಪುತ್ತೂರಿನ ಕಬಕದಲ್ಲಿ ಸ್ವಾತಂತ್ರೋತ್ಸವ ರಥಯಾತ್ರೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವೀರ ಸಾವರ್ಕರ್ ಹೆಸರು ಕರಾವಳಿಯಲ್ಲಿ ಮುನ್ನಣೆಗೆ ಬಂದಿದೆ.
ಈ ಮಧ್ಯೆ ಪಂಪ್ವೆಲ್ ಮೇಲ್ಸೇತುವೆಗೆ ‘ವೀರಸಾವರ್ಕರ್ ಮೇಲ್ಸೇತುವೆ’ ಹಾಗೂ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ‘ವೀರ ಸಾವರ್ಕರ್ ರೈಲು ನಿಲ್ದಾಣ’ ಎಂದು ಹೆಸರಿಸಿ ಬಜರಂಗದಳದ ಹೆಸರಿನಲ್ಲಿ ಬ್ಯಾನರ್ಗಳನ್ನು ಅಂಟಿಸಿದ ಘಟನೆ ನಡೆದಿದೆ.
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಅದನ್ನು ತಕ್ಷಣವೇ ತೆರವುಗೊಳಿಸಿದರು.
- Advertisement -