- Advertisement -
- Advertisement -
ಮಡಿಕೇರಿ: ಮಾಣಿ – ಮೈಸೂರು ರಾಷ್ಟ್ರಿಯ ಹೆದ್ದಾರಿ 275 ಜೋಡುಪಾಲ ಸಮೀಪ ರಸ್ತೆ ಕುಸಿದಿದ್ದು, ಇದರಿಂದಾಗಿ ಈ ರಸ್ತೆ ಮೂಲಕ ಸಂಚಾರಿಸುವ ಘನ ವಾಹನಗಳನ್ನು ತಡೆ ಹಿಡಿಯಲಾಗುತ್ತಿದೆ.
ಕಳೆದ ವರ್ಷ ಮಳೆಗಾಲ ಸಂದರ್ಭ ಜೋಡುಪಾಲ ಜಂಕ್ಷನ್ ಸಮೀಪ ರಸ್ತೆ ಕೆಳಭಾಗ ಕುಸಿದಿದ್ದು, ಬಳಿಕ ಈ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು.
ಇತ್ತೀಚೆಗೆ ರಸ್ತೆ ದುರಸ್ತಿ ಮಾಡುವ ಕೆಲಸ ಪ್ರಾರಂಭಿಸಲಾಗಿತ್ತು. ಕೆಲವು ದಿನಗಳಿಂದ ಭಾರಿ ಮಳೆ ಸುರಿದಿದ್ದು, ಇದರಿಂದಾಗಿ ಶನಿವಾರ ರಸ್ತೆ ಬಿರುಕು ಬಿಟ್ಟು ಕುಸಿದಿತ್ತು. ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಭಂಧಿಸಿ ಆದೇಶ ಹೊರಡಿಸಿದ್ದು, ಈ ಕಾರಣದಿಂದ ಘನ ವಾಹನಗಳನ್ನು ಸಂಪಾಜೆ ಗೇಟ್ ನಲ್ಲಿ ತಡೆಯಲಾಗುತ್ತಿದೆ.
- Advertisement -