ಮಾಣಿ : ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ 26ನೇ ಸ್ವಲಾತ್ ವಾರ್ಷಿಕ ಮತ್ತು ಎರಡು ದಿನಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಫೆಬ್ರವರಿ 3,4 ಶನಿವಾರ ಮತ್ತು ಆದಿತ್ಯವಾರ ನಡೆಯಲಿದೆ. ಫೆಬ್ರವರಿ 3 ಶನಿವಾರ ಮಗ್ರಿಬ್ ನಮಾಝ್ ಬಳಿಕ ಖ್ಯಾತ ಯುವ ವಾಗ್ಮಿ ಮುಹಮ್ಮದ್ ಹುಸೈನ್ ಮುಈನೀ ಅಲ್ ಅಹ್ಸನಿ ಮಾರ್ನಾಡ್ ಧಾರ್ಮಿಕ ಪ್ರವಚನ ನೀಡಲಿದ್ದು,ಫೆಬ್ರವರಿ 4 ಆದಿತ್ಯವಾರ ಮಗ್ರಿಬ್ ಬಳಿಕ ವಾಗ್ಮಿ ಜಮಾಲುದ್ದೀನ್ ದಾರಿಮಿ ಗುರುಪುರ ಪ್ರವಚನ ನೀಡುವರು.
ಬಳಿಕ ನಡೆಯುವ ಸ್ವಲಾತ್ ವಾರ್ಷಿಕ ಕಾರ್ಯಕ್ರಮದಲ್ಲಿ ಸಯ್ಯಿದ್ ಅನಸ್ ಹಾದಿ ತಂಙಳ್ ಅಝ್ಹರಿ ನೇತೃತ್ವ ವಹಿಸಿ ದುಆ ನಡೆಸಿಕೊಡುವರು. ವೇದಿಕೆಯಲ್ಲಿ ಮಸೀದಿಯ ಖತೀಬ್ ಮುಹಮ್ಮದ್ ಹನೀಫ್ ಸಅದಿ ಅಲ್ ಫುರ್ಖಾನಿ, ಸದರ್ ಮುಅಲ್ಲಿಂ ಕೆ ಎ ಇಬ್ರಾಹಿಂ ಅಲ್ ಫುರ್ಖಾನಿ, ಮುಅಲ್ಲಿಂ ನವಾಝ್ ಹನೀಫಿ ಅಲ್ ಅಶ್ಹರಿ ,ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಸೂರಿಕುಮೇರು, ಕಾರ್ಯದರ್ಶಿ ಅಮೀರುದ್ದೀನ್ ಸೂರಿಕುಮೇರು, ಕೋಶಾಧಿಕಾರಿ ಯೂಸುಫ್ ಹಾಜಿ ಸೂರಿಕುಮೇರು, ಮುಹಮ್ಮದ್ ಅಲೀ ನವವೀ ಸೂರಿಕುಮೇರು, ಸಹಿತ ಹಲವಾರು ಗಣ್ಯರು ಉಲಮಾಗಳು ಉಪಸ್ಥಿತರಿರುವರು,ಎಂದು ಪ್ರಕಟಣೆ ತಿಳಿಸಿದೆ.