- Advertisement -
- Advertisement -
ಮಣಿಪಾಲ: ವಿಹಾರಕ್ಕೆಂದು ಸ್ನೇಹಿತೆಯೊಂದಿಗೆ ತಿರುಗಾಡಲು ಹೋಗಿದ್ದ ಯುವಕನಿಗೆ, ಹಿಂದೂ ಸಂಘಟನೆಯ ಎನ್ನಲಾದ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ.
ಈ ಬಗ್ಗೆ ಸಾಲಿಗ್ರಾಮದ ಅಲ್ತಪ್ (27) ಎಂಬವರು ದೂರು ದಾಖಲಿಸಿದ್ದಾರೆ. ಪ್ರಾಣೇಶ್, ವಿನೂತ್ ಪೂಜಾರಿ, ಸಂಜಯ ಕುಮಾರ್ ಎಂಬ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಅಲ್ತಪ್ ಎಂಬವರು ನೆರೆಮನೆಯ ಸ್ನೇಹಿತೆಯೊಂದಿಗೆ ತಿರುಗಾಡಲು ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿ ಹೋಗಿದ್ದರು. ಈ ವೇಳೆ ಪ್ರಾಣೇಶ್, ವಿನೂತ್ ಪೂಜಾರಿ ಮತ್ತು ಸಂಜಯ್ ಕುಮಾರ್ ರವರು ಇವರಿಬ್ಬರನ್ನು ತಡೆದು, ಅಲ್ತಾಪ್ರನ್ನು ತಳ್ಳಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -