Thursday, April 18, 2024
spot_imgspot_img
spot_imgspot_img

ವಿಹಾರಕ್ಕೆ ಬಂದ ಜೋಡಿಗೆ ಹಿಂದೂ ಸಂಘಟನೆಯ ಯುವಕರಿಂದ ಹಲ್ಲೆ: ದೂರು ದಾಖಲು..!!

- Advertisement -G L Acharya panikkar
- Advertisement -

vtv vitla
vtv vitla

ಮಣಿಪಾಲ: ವಿಹಾರಕ್ಕೆಂದು ಸ್ನೇಹಿತೆಯೊಂದಿಗೆ ತಿರುಗಾಡಲು ಹೋಗಿದ್ದ ಯುವಕನಿಗೆ, ಹಿಂದೂ ಸಂಘಟನೆಯ ಎನ್ನಲಾದ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ.

ಈ ಬಗ್ಗೆ ಸಾಲಿಗ್ರಾಮದ ಅಲ್ತಪ್ (27) ಎಂಬವರು ದೂರು ದಾಖಲಿಸಿದ್ದಾರೆ. ಪ್ರಾಣೇಶ್, ವಿನೂತ್ ಪೂಜಾರಿ, ಸಂಜಯ ಕುಮಾರ್ ಎಂಬ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಅಲ್ತಪ್ ಎಂಬವರು ನೆರೆಮನೆಯ ಸ್ನೇಹಿತೆಯೊಂದಿಗೆ ತಿರುಗಾಡಲು ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿ ಹೋಗಿದ್ದರು. ಈ ವೇಳೆ ಪ್ರಾಣೇಶ್, ವಿನೂತ್ ಪೂಜಾರಿ ಮತ್ತು ಸಂಜಯ್ ಕುಮಾರ್ ರವರು ಇವರಿಬ್ಬರನ್ನು ತಡೆದು, ಅಲ್ತಾಪ್‌ರನ್ನು ತಳ್ಳಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla

- Advertisement -

Related news

error: Content is protected !!