Thursday, March 28, 2024
spot_imgspot_img
spot_imgspot_img

ಕರಾವಳಿಗರೇ ಎಚ್ಚರ..! ಮೂರ್ಛೆ ತಪ್ಪಿಸಿ ಮನೆಯನ್ನೇ ಕೊಳ್ಳೆ ಹೊಡೆಯುತ್ತೆ ಈ ಖತರ್ನಾಕ್ ಗ್ಯಾಂಗ್!

- Advertisement -G L Acharya panikkar
- Advertisement -

ಉಡುಪಿ: ಕರಾವಳಿಗರೇ ಎಚ್ಚರ. ಉಡುಪಿ ಜಿಲ್ಲೆಯಲ್ಲೀಗ ಮೂರ್ಛೆ ತಪ್ಪಿಸಿ ಮನೆಯನ್ನೇ ಕೊಳ್ಳೆ ಹೊಡೆಯುವ ಖತರ್ನಾಕ್ ಗ್ಯಾಂಗ್ ಬಂದಿದೆ. ಹೀಗಂತೆ ಖುದ್ದು ಮಣಿಪಾಲ ಠಾಣೆಯ ಪೊಲೀಸರೇ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.

ಫಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ಕಳ್ಳತನ ನಡೆಸುತ್ತಿರುವ ಮಹಿಳೆಯರ ಗುಂಪೊಂದು ಉಡುಪಿ ನಗರದಲ್ಲಿ ಸಕ್ರೀಯವಾಗಿದೆ.

ಮಣಿಪಾಲ ಪೊಲೀಸರು ಈ ಬಗ್ಗೆ ಪ್ರಕಟಣೆ ನೀಡಿದ್ದು, ಐದರಿಂದ ಆರು ಮಂದಿ ಮಹಿಳೆಯರು ಕೂಡಿಕೊಂಡು ಪಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ ಬಾಟಲಿಯ ವಾಸನೆ ತೋರಿಸಿ, ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ಗುಂಪೊಂದು ನಗರಕ್ಕೆ ಬಂದಿದೆ.


ಇಂಥವರು ಯಾರಾದರೂ ಅಪರಿಚಿತರು ಸಂಶಯಾಸ್ಪದವಾಗಿ ತಮ್ಮ ಮನೆ ಮುಂದೆ ಓಡಾಡಿಕೊಂಡಿದ್ದರೆ, ಅಂಥವರು ಕಂಡುಬಂದರೆ ಅವರಿಂದ ದೂರವಿದ್ದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ.ನಿಮ್ಮ ಕಣ್ಣಿಗೆ ಇಂತಹ ಗುಂಪು ಕಾಣಿಸಿಕೊಂಡರೆ ಕೂಡಲೇ ಮಣಿಪಾಲ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್: 9480805448. ಸಬ್ ಇನ್ಸ್ ಪೆಕ್ಟರ್: 9480805475 ಅಥವಾ 112 ಸಂಪರ್ಕ ಮಾಡಬಹುದಾಗಿದೆ.

- Advertisement -

Related news

error: Content is protected !!