Monday, April 29, 2024
spot_imgspot_img
spot_imgspot_img

ವಿವಾಹಿತ ಮಹಿಳೆ‌ ನೇಣು ಬಿಗಿದ ಸ್ಥಿತಿಯಲ್ಲಿ ಸಾವು..!

- Advertisement -G L Acharya panikkar
- Advertisement -

ವಿವಾಹಿತ ಮಹಿಳೆ‌ಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಪೀಣ್ಯಾದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಚೈತ್ರಾ ಎಂದು ಗುರುತಿಸಲಾಗಿದೆ.

ರಾಮನಗರ ಮೂಲದ ಮೃತ ಚೈತ್ರಾ ಐದು ವರ್ಷಗಳ ಹಿಂದೆ ಪೀಣ್ಯಾದಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ದೂರದ ಸಂಬಂಧಿ ಸಂತೋಷ್ ನನ್ನ ಪ್ರೀತಿಸಿ ಮದುವೆಯಾಗಿದ್ದಳು. ಅಳಿಯ ವರದಕ್ಷಿಣೆಗಾಗಿ ಮೃತ ಚೈತ್ರಾಗೆ ಹಿಂಸೆ ನೀಡುತ್ತಿದ್ದ. ಇತ್ತೀಚೆಗೆ ಐದು ಲಕ್ಷ ರೂಪಾಯಿ ಸಹ ನೀಡಿದ್ವಿ, ಆದ್ರೂ, ಸುಮ್ಮನಾಗದೇ ಮಗಳಿಗೆ ದೈಹಿಕ ಮಾನಸಿಕವಾಗಿ ಹಿಂಸೆ ನೀಡಿ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಮೃತ ಚೈತ್ರಾ ಕುಟುಂಬಸ್ಥರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಅಳಿಯ ಸಂತೋಷನೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಅಂತ ಆರೋಪಿಸಿದ್ದಾರೆ.

ಮೃತ ಚೈತ್ರಾ ಕುಟುಂಬಸ್ಥರಿಂದ ಪತಿ ಸಂತೋಷ್ ಹಾಗೂ ಕುಟುಂಬಸ್ಥರ ವಿರುದ್ಧ ಪೀಣ್ಯಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂತೋಷ್ ಹಾಗೂ ಆತನ ಮನೆಯವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!