Monday, April 29, 2024
spot_imgspot_img
spot_imgspot_img

(ಜ.21) ಮಂಗಳೂರಿನಲ್ಲಿ “ಮೋದಿ ಬ್ರಿಗೇಡ್” ಉದ್ಘಾಟನಾ ಸಮಾರಂಭ

- Advertisement -G L Acharya panikkar
- Advertisement -

ರಾಷ್ಟ್ರವಾದದ ಅಧಿಷ್ಠಾನದಲ್ಲಿ, ಸಾಂಸ್ಕೃತಿಕ ಪುನರುತ್ಥಾನದ ಜಗದ್ವಂದ್ಯ ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತ ವಿಶ್ವಗುರುವಾಗಿ ಮಿನುಗುತ್ತಿದೆ. ದೇಶ ಪ್ರೇಮದ ಆಡಳಿತದಿಂದಾಗಿ ಜಾಗತಿಕ ಶಕ್ತರಾಷ್ಟ್ರಗಳ ನಡುವೆ ಭಾರತವು ಶಿರೋಮಣಿಯಾಗಿ ಕಂಗೊಳಿಸುತ್ತ ಸಶಕ್ತ ಯುವ ಭಾರತವು ನವ ನಿರ್ಮಾಣದ ಉದ್ದೇಶಕ್ಕಾಗಿ ಅಭಿವೃದ್ದಿ ಪಥದಲ್ಲಿ ವೇಗವಾಗಿ ಸಾಗುತ್ತಿರುವ, ಶಕ್ತಿಶಾಲಿ ಭಾರತ ನಿರ್ಮಾಣದ ಸಂಕಲ್ಪಕ್ಕೆ ಬಲತುಂಬುವ ಸಲುವಾಗಿ ಮತ್ತೊಮ್ಮೆ ಮೋದಿ ಎಂಬ ಘೋಷಣೆಯ ಯುವ ಚೈತನ್ಯದೊಂದಿಗೆ “ಮೋದಿ ಬ್ರಿಗೇಡ್” ಉದ್ಘಾಟನೆಯು ಜ.21 ರಂದು ಬೆಳಿಗ್ಗೆ 10.30ಕ್ಕೆ ಟಿ.ವಿ ರಮಣ ಪೈ ಕನ್ವೆನ್ಷನ್ ಸೆಂಟರ್‍, ನವಭಾರತ್ ಸರ್ಕಲ್ ಮಂಗಳೂರು ಇಲ್ಲಿ ನಡೆಯಲಿದೆ.

ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಾದೀಶರಾದ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಗೌರಿಗದ್ದೆ ಆಶ್ರಮದ ಅವದೂತ ಶ್ರೀ ವಿನಯ್ ಗುರೂಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮೀರಾ ರಾಘವೇಂದ್ರ ನ್ಯಾಯವಾದಿಗಳು, ರಾಷ್ಟ್ರೀಯವಾದಿ ಇವರು ಪ್ರಮುಖ ಭಾಷಣಗೈಯಲಿದ್ದಾರೆ.

- Advertisement -

Related news

error: Content is protected !!