Sunday, May 5, 2024
spot_imgspot_img
spot_imgspot_img

ಹುಡುಗಿಗೆ ಮೆಸೇಜ್ ಕಳಿಸಿದನೆಂದು ಯುವಕನ ಕತ್ತು ಹಿಸುಕಿ ಕೊಲೆ

- Advertisement -G L Acharya panikkar
- Advertisement -

ಅಲಪ್ಪುಳ: ಹುಡುಗಿಯೊಬ್ಬಳಿಗೆ ಮೆಸೇಜ್ ಕಳಿಸಿದ ಎಂಬ ಕಾರಣಕ್ಕೆ 7 ಜನರ ಗುಂಪೊಂದು ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೇರಳದ ಪೂಚಕ್ಕಲ್ ಎಂಬಲ್ಲಿ ನಡೆದಿದೆ. 37 ವರ್ಷದ ವಿಪಿನ್ ಲಾಲ್ ಹುಡುಗಿಯೊಬ್ಬಳಿಗೆ ಅಸಭ್ಯವಾಗಿ ಮೆಸೇಜ್ ಮಾಡಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ರಾತ್ರಿ ವಿಪಿನ್ ಮೇಲೆ ಹಲ್ಲೆ ನಡೆಸಿದ ಯುವಕರ ಗುಂಪು ಆತನನ್ನು ಥಳಿಸಿತ್ತು. ಹುಡುಗಿಗೆ ಮಸೇಜ್ ಕಳಿಸಿದ್ದರಿಂದ ಈ ಕೊಲೆ ನಡೆಸಿದ್ದು, ಇದರ ಹಿಂದೆ ಬೇರಾವ ಕಾರಣವೂ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಗೆ ಕಳುಹಿಸಿದ ಮೆಸೇಜ್ ನೋಡಿ ಕೋಪಗೊಂಡ ಆಕೆಯ ಸಂಬಂಧಿಕರು ನಿನ್ನೆ ನಡು ರಸ್ತೆಯಲ್ಲಿ ವಿಪಿನ್ ಲಾಲ್​ನನ್ನು ಅಡ್ಡ ಹಾಕಿದ್ದರು. ರಸ್ತೆಯಲ್ಲೇ ಥಳಿಸಿದ ಆ ಗುಂಪು ಬಳಿಕ ಆತನ ಉಸಿರುಗಟ್ಟಿಸಿ ಕೊಂದಿದ್ದಾರೆ.

ಹುಡುಗಿಗೆ ಏನು ಮೆಸೇಜ್ ಕಳುಹಿಸಿದ ಕಾರಣಕ್ಕೆ ಈ ಗಲಾಟೆ ನಡೆದಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಎರಡೂ ಕುಟುಂಬಗಳು ಈ ಹಿಂದಿನಿಂದಲೂ ಪರಿಚಿತರಾಗಿದ್ದರು ಎನ್ನಲಾಗಿದೆ. ಮೆಸೇಜ್​ಗೆ ಸಂಬಂಧಿಸಿದ ಗಲಾಟೆಯೇ ಈ ಹತ್ಯೆಗೆ ಕಾರಣ ಎನ್ನಲಾಗಿದೆ. ಈ ಕೊಲೆಯ ಹಿಂದಿರುವ ಇನ್ನೂ ಕೆಲವು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

driving
- Advertisement -

Related news

error: Content is protected !!