




ವಿಟಿವಿ ವಿಟ್ಲ ಪ್ರಸ್ತುತ ಪಡಿಸುವ ಸಪ್ತ ಜ್ಯುವೆಲ್ಸ್ ಸಹಕಾರದೊಂದಿಗೆ ನಡೆಸಿದ ‘ಮುದ್ದುಕೃಷ್ಣ ಫೋಟೋ ಸ್ಪರ್ಧೆ-2025” ಬಹುಮಾನ ವಿತರಣಾ ಕಾರ್ಯಕ್ರಮ ವಿಟ್ಲ ಸಪ್ತ ಜ್ಯುವೆಲ್ಸ್ನಲ್ಲಿ ನಡೆಯಿತು.

ಪ್ರಥಮ ಸ್ಥಾನವನ್ನು ಕ್ರಮ ಸಂಖ್ಯೆ 73 ಆಯುಷ್ ಆರ್ ಕೆ ಮಂಚಿ ಕುಕ್ಕಾಜೆ, ದ್ವಿತೀಯ ಸ್ಥಾನವನ್ನು ಕ್ರಮ ಸಂಖ್ಯೆ 51 ಅಥರ್ವ ರೈ, ತೃತೀಯ ಸ್ಥಾನವನ್ನು ಕ್ರಮ ಸಂಖ್ಯೆ 76 ಪ್ರಿಯಾಂಶ್ ಎಸ್ ದೇವಾಡಿಗ ಬಂಟ್ವಾಳ ಗಳಿಸಿಕೊಂಡಿದ್ದಾರೆ.
ಆಕರ್ಷಕಣೀಯ 7 ವಿಜೇತ ಫೋಟೋಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಕ್ರಮ ಸಂಖ್ಯೆ 77 ಪ್ರದ್ವಿನ್ ರಿಯಾಂಶ್, ಕ್ರಮ ಸಂಖ್ಯೆ 27 ಗ್ರಿತಿ ಸಿ ಎಚ್, ಕ್ರಮ ಸಂಖ್ಯೆ 48 ಮನಸ್ವಿ ಎಂ, ಕ್ರಮ ಸಂಖ್ಯೆ 54 ತ್ರಿಶಾನ್ ಶೆಟ್ಟಿ, ಕ್ರಮ ಸಂಖ್ಯೆ 52 ಯಶ್ವಿನ್, ಕ್ರಮ ಸಂಖ್ಯೆ 68 ಕಣ್ವಿ ಕೆ.ವಿ, ಕ್ರಮ ಸಂಖ್ಯೆ 36 ಆದಿದೇವ್ ತೀರ್ಪುಗಾರರ ಆಯ್ಕೆಯ ಮೇರೆಗೆ ಹಾಗೂ ಅತೀ ಹೆಚ್ಚು, ಲೈಕ್ಸ್, ಶೇರ್ ಹಾಗೂ ಕಮೆಂಟ್ಸ್ ಗಳನ್ನು ಪರಿಗಣಿಸಿ ಪ್ರಥಮ, ದ್ವಿತೀಯ, ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಪ್ತ ಜ್ಯುವೆಲ್ಸ್ ಸಂಸ್ಥೆಯ ಪಾಲುದಾರರು ಅಜೆಕಳ ಶ್ಯಾಮ್ ಭಟ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಉಪಾಧ್ಯಕ್ಷರು ಜ್ಯೋತಿ ಪ್ರಕಾಶ್ ಪುಣಚ, ವಿಟಿವಿ ಆಡಳಿತ ನಿರ್ದೇಶಕರು ರಾಮ್ದಾಸ್ ಶೆಟ್ಟಿ ಉಪಸ್ಥಿತರಿದ್ದರು.









