- Advertisement -
- Advertisement -
ಮಂಗಳೂರು: ದಾಸ್ತಾನು ಇಟ್ಟಿದ್ದ ಸಿಮೆಂಟ್ ಪೈಪ್ ವೊಂದು ಉರುಳಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟಿರುವ ಘಟನೆ ಇಲ್ಲಿನ ಲಿಂಗಪ್ಪಯ್ಯ ಕಾಡಿನ ಆಶ್ರಯ ಕಾಲೊನಿಯ ಬಳಿಯಲ್ಲಿ ಸಂಭವಿಸಿದೆ.
ಮೃತಪಟ್ಟ ಬಾಲಕ ಲಿಂಗಪ್ಪಯ್ಯ ಕಾಡಿನ ನಿವಾಸಿ ರಾಮು ಎಂಬುವರ ಮಗ ಯುವರಾಜ (4) ಎನ್ನಲಾಗಿದೆ.
ನಾಗರಾಜ್ ಎಂಬುವವರ ಕಂಪನಿಯ ಸಿಮೆಂಟ್ ಪೈಪ್ ಗಳನ್ನು ದಾಸ್ತಾನು ಇಡಲಾಗಿತ್ತು. ಅಲ್ಲಿಯೇ ಆಟವಾಡುತ್ತಿದ್ದ ಮಗುವಿನ ಮೇಲೆ ಪೈಪ್ ಗಳು ಉರುಳಿ ಬಿದ್ದಿದ್ದು ,ಕೂಡಲೇ ಮಗುವನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಈ ಘಟನೆ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -