ತೀರ್ಥಹಳ್ಳಿ : ಟಿ.ವಿ ನೋಡಲು ಬರುತ್ತಿದ್ದ ಪಕ್ಕದ ಮನೆಯ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ ಗರ್ಭವತಿಯನ್ನಾಗಿ ಮಾಡಿದ ಆರೋಪದ ಅಡಿಯಲ್ಲಿ ಶಿವಮೊಗ್ಗದ ತೀರ್ಥ ಹಳ್ಳಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮುರುಳೀಧರ್ ಭಟ್ ಬಂಧನಕ್ಕೊಳಗಾದ ವ್ಯಕ್ತಿ.
ತೀರ್ಥಹಳ್ಳಿಯ ನಾಲೂರಿನಲ್ಲಿ ಯುವತಿಯೊಬ್ಬಳು 2021ರ ಡಿಸೆಂಬರ್ ನಲ್ಲಿ ಕಾಲೇಜು ಇಲ್ಲದ ಕಾರಣ ಪಕ್ಕದ ಮನೆಯ ಮುರುಳೀಧರ್ ಭಟ್ ಎಂಬುವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದಳು. ಟಿವಿ ನೋಡುವ ವೇಳೆ ಯುವತಿಯನ್ನು ಬಲತ್ಕರಿಸಿರುವುದಾಗಿ ಯುವತಿ ಆರೋಪಿಸಿದ್ದಾಳೆ.
ಇದಾದ ನಂತರ ದಾರಿಯಲ್ಲಿ ಸಿಕ್ಕಾಗಲೆಲ್ಲಾ ಮನೆಗೆ ಬಾ ಎಂದು ಕರೆದಿದ್ದು, ಎರಡು ಮೂರು ಬಾರಿ ಆತನ ಆಹ್ವಾನವನ್ನು ತಿರಸ್ಕರಿಸಿದ ಯುವತಿಗೆ ಮುರಳೀಧರ್ ಮನೆಗೆ ಬಾರದಿದ್ದರೆ ನಿನ್ನನ್ನೂ ಮತ್ತು ನಿನ್ನ ತಾಯಿಯನ್ನು ಜೀವಂತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬೆದರಿಕೆಯ ಬೆನ್ನಲ್ಲೇ ಮನೆಗೆ ಬಂದ ಯುವತಿಯನ್ನು ಮತ್ತೆ ಬಲತ್ಕರಿಸಿರುವುದಾಗಿ ಆರೋಪಿಸಲಾಗಿದೆ.
ಇದಾದ ನಂತರ ದೇಹದಲ್ಲಿ ಬದಲಾವಣೆಯಾಗಿದ್ದು, ತಾಯಿ ಇದನ್ನು ಗಮನಿಸಿ ತೀರ್ಥಹಳ್ಳಿಯಲ್ಲಿ ಆಸ್ಪತ್ರೆಗೆ ತೋರಿಸಿದಾಗ ಯುವತಿ 7 ತಿಂಗಳ ಗರ್ಭವತಿ ಎಂದು ತಿಳಿದು ಬಂದಿದೆ.