- Advertisement -
- Advertisement -
ವಿಟ್ಲ : ಜಂಗಮುಗೇರಿನ ಮುತ್ತಪ್ಪ ಪೂಜಾರಿ ಎಂಬವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಅಮಲು ಸೇವನೆಯ ನಂತರ ಸರಿಯಾದ ಸಮಯ ಊಟ ಮಾಡದೇ ಇದ್ದ ಕಾರಣ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದರು.
ಜಾತ್ರೆಗೆ ಹೋದವರು ಹುಷಾರು ತಪ್ಪಿದ್ದು ಅವರನ್ನು ಉಪಚರಿಸಿ ಮನೆಗೆ ಕರೆತರಲಾಯಿತು. ಗುಣಮುಖರಾಗದೇ ಇದ್ದ ಕಾರಣ ಅವರನ್ನು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು,ಅವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲವೆಂದು ತಿಳಿದು ಬಂದಿದೆ.
- Advertisement -