- Advertisement -
- Advertisement -
ತುಮಕೂರು: ರೌಡಿಶೀಟರ್ ಆರ್.ಎಕ್ಸ್ ಮಂಜು ಕೊಲೆ ಪ್ರಕರಣದ ಆರೋಪಿ ವಿಕ್ಕಿ ಮೇಲೆ ಪೊಲೀಸರು ಇಂದು ಫೈರಿಂಗ್ ಮಾಡಿ, ಬಂಧಿಸಿದ್ದಾರೆ.ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಜ್ಜಪ್ಪನಹಳ್ಳಿ ಬಳಿ ಆರೋಪಿ ವಿಕ್ಕಿ ಇರುವುದಾಗಿ ಮಾಹಿತಿ ಪಡೆದ ಪೊಲೀಸರು, ಆತನನ್ನು ಬಂಧಿಸಲು ತೆರಳಿದ್ದರು.
ಈ ವೇಳೆ ಆರೋಪಿ ಎಎಸ್ಐ ಪರಮೇಶ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ ಎನ್ನಲಾಗಿದೆ. ಹೀಗಾಗಿ, ತಿಲಕ್ ಪಾರ್ಕ್ ಸಬ್ಇನ್ಸ್ಪೆಕ್ಟರ್ ನವೀನ್, ಆರೋಪಿಯ ಮೇಲೆ ಫೈರಿಂಗ್ ಮಾಡಿದ್ದಾರೆ.
ಮೊನ್ನೆಯಷ್ಟೇ ರೌಡಿಶೀಟರ್ ಮಂಜು ಅಲಿಯಾಸ್ ಆರ್.ಎಕ್ಸ್ ಮಂಜುನನ್ನು ಮತ್ತೊಂದು ರೌಂಡಿ ಗುಂಪು ತುಮಕೂರಿನ ಎಸ್ಐಟಿ ಬಡಾವಣೆಯ ಮಂಜುಶ್ರೀ ಬಾರ್ ಎದುರು ಚಾಕುವಿನಿಂದ ಇರಿದು ಕೊಲೆ ಮಾಡಿತ್ತು. ಈ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ವಿಕ್ಕಿ ಕೂಡ ಒಬ್ಬನಾಗಿದ್ದ. ಸದ್ಯ ಗಾಯಾಳು ವಿಕ್ಕಿಯನ್ನು ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
- Advertisement -