- Advertisement -
- Advertisement -
ಮೈಸೂರು: ಮೈಸೂರು ನೂತನ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ರಾಜ್ಯದೆಲ್ಲೆಡೆ ಅನ್ನದಾತರು ಬೀದಿಗಿಳಿದಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ಅನೇಕ ಸಂಘಟನೆಗಳು ರೈತರಿಗೆ ಬೆಂಬಲ ನೀಡಿವೆ. ಮೈಸೂರಿನಲ್ಲಿ ರೈತ ಸಂಘಟನೆ ಹಾಗೂ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇದನ್ನ ಹೊರತುಪಡಿಸಿ ಯಾವುದೇ ಪ್ರತಿಭಟನೆ ಇರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ಮೈಸೂರಿನಲ್ಲಿ ಅನ್ನದಾತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನಲ್ಲಿ ರೈತರ ಹೆದ್ದಾರಿ ತಡೆ ಪ್ರತಿಭಟನೆ ಕೇವಲ ಅರ್ಧ ಗಂಟೆಗೆ ಸೀಮಿತವಾಗಿತ್ತು. ರೈತರು ಸಾಂಕೇತಿಕವಾಗಿ ರಸ್ತೆ ತಡೆದು ಅರ್ಧ ಗಂಟೆಗೆ ಪ್ರತಿಭಟನೆ ಮುಗಿಸಿದರು. ನಂತರ ಪೊಲೀಸರ ಸೂಚನೆಯಂತೆ ವಾಪಸ್ಸಾದರು.
- Advertisement -