Tuesday, June 9, 2026
spot_imgspot_img
spot_imgspot_img

ನವದೆಹಲಿ: ಕೇಂದ್ರ ಬಜೆಟ್ ಮಂಡನೆ-2026; ಪ್ರಮುಖ ಅಂಶಗಳು

- Advertisement -
- Advertisement -

ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಭತ್ತನೇ ಬಜೆಟ್ ಮಂಡನೆ ಮಾಡಿದ್ದು, ಮಂಡನೆಯಪ್ರಮುಖ ಅಂಶಗಳು ಈ ಕೆಳಗಿನಂತಿವೆ:

  • ಆರೋಗ್ಯ ಕ್ಷೇತ್ರಕ್ಕೆ ಬಯೋ ಫಾರ್ಮಾ ಶಕ್ತಿ ಯೋಜನೆ
  • 550ಕ್ಕೂ ಹೆಚ್ಚು ಸುಧಾರಣಾ ಕ್ರಮ
  • ದೇಶವನ್ನು ಔಷಧ ತಯಾರಿಕಾ ಹಬ್ ಮಾಡಲು ಕ್ರಮ
  • ಬಯೋ ಫಾರ್ಮಾ ಯೋಜನೆಗೆ 1 ಸಾವಿರ ಕೋಟಿ ಮೀಸಲು
  • ರೇರ್ ಅರ್ಥ್ ಗಣಿಗಾರಿಕೆಗೆ ಪ್ರಾಶಸ್ತ್ರ
  • ವಿರಳ ಲೋಹಗಳ ಸಂಗ್ರಹಕ್ಕಾಗಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದಲ್ಲಿ ಕಾರಿಡಾರ್
  • ಸೆಮಿಕಂಡಕ್ಟರ್ ಮಿಷನ್ 2.0 ಯೋಜನೆ : 40 ಕೋಟಿ ಮೀಸಲು
  • ಟೆಕ್ಸ್ ಟೈಲ್ ಕ್ಷೇತ್ರದ ಅಭಿವೃದ್ಧಿಗಾಗಿ ರಾಷ್ಟ್ರೀಯ ನೀತಿ ಘೋಷಣೆ
  • ಕಂಟೈನರ್ ಯೋಜನೆಗೆ 10 ಸಾವಿರ ಕೋಟಿ ಮೀಸಲು
  • ಖಾದಿ ಗ್ರಾಮೋದ್ಯೋಗ ಯೋಜನೆ
  • ಸಣ್ಣ ಕೈಗಾರಿಕೆಗೆ 10 ಸಾವಿರ ಕೋಟಿ ಮೀಸಲು
  • ಸಣ್ಣ- ಅತಿ ಸಣ್ಣ ಕೈಗಾರಿಕೆಗಳಿಗೆ 2 ಸಾವಿರ ಕೋಟಿ ಫಂಡ್
  • 2026 – 27ರ ಬಂಡವಾಳ ವೆಚ್ಚ 12.2 ಕೋಟಿ ಕೋಟಿಗೆ ಏರಿಕೆ
  • ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 20 ಜಲಮಾರ್ಗ ನಿರ್ಮಾಣ
  • 2-3ನೇ ಹಂತದ ನಗರಗಳ ಮೂಲ ಸೌಕರ್ಯಗಳ ಅಭಿವೃದ್ಧಿ
  • ಧಾರ್ಮಿಕ ಹಿನ್ನೆಲೆಯುಳ್ಳ ನಗರಗಳ ಅಭಿವೃದ್ಧಿಗೆ ಆದ್ಯತೆ
  • ನಗರಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಮೀಸಲು
  • ಬೆಂಗಳೂರು – ಹೈದರಾಬಾದ್, ಬೆಂಗಳೂರು – ಚೆನ್ನೈ ಹೈಸ್ಪೀಡ್ ರೈಲು
  • ಎಐ ತಂತ್ರಜ್ಞಾನದ ಅಭಿವೃದ್ಧಿಗಾಗಿ ಆದ್ಯತೆ
  • ವಿದ್ಯೆಯಿಂದ ಉದ್ಯೋಗ ಸೃಷ್ಟಿಗಾಗಿ ವಿಶೇಷ ಸಮಿತಿ ರಚನೆ
  • ಖಾಸಗಿ ವಲಯದ ಜೊತೆ ಸೇರಿ ದೇಶದಾದ್ಯಂತ 5 ಮೆಡಿಕಲ್ ಹಬ್ ನಿರ್ಮಾಣ.
  • ಮೆಡಿಕಲ್ ಟೂರಿಸಂ ಯೋಜನೆ ಉತ್ತೇಜನಕ್ಕೆ ಕ್ರಮ
  • ಆಯುರ್ವೇದಕ್ಕೆ ಹೆಚ್ಚಿನ ಒತ್ತು. 3 ಸಂಸ್ಥೆಗಳ ನಿರ್ಮಾಣ, ಆಯುಷ್ ಫಾರ್ಮಸಿಗಳ ಅಭಿವೃದ್ಧಿ, ಮೆಸಿನ್ ಸೆಂಟರ್ -ರಿಸರ್ಚ್ ಸೆಂಟರ್ ಗಳ ನಿರ್ಮಾಣಕ್ಕೆ ಒತ್ತು
  • ಮುಂಬೈಯಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಹಾಸ್ಪಿಟಲಿಟಿ
  • ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣ : ಜಾಗತಿಕವಾಗಿ ಸ್ಪರ್ಧೆಗಳಿಗೆ ಕ್ರೀಡಾಪಟುಗಳಿಗೆ ತರಬೇತಿ, ಖೇಲೋ ಇಂಡಿಯಾ ಮಿಷನ್ ಯೋಜನೆ
  • ಕರ್ನಾಟಕ ಕರಾವಳಿಯಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿ
  • ಈಶಾನ್ಯ ಭಾರತದಲ್ಲಿ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಠಿಗೆ ಅಗತ್ಯ ಕ್ರಮ
  • ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಒತ್ತು
  • ತೆಂಗಿನಕಾಯಿ ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಗಾಗಿ ಆದ್ಯತೆ
  • ಹೆಚ್ಚು ಇಳುವರಿಗಾಗಿ ತಳಿಗಳ ಅಭಿವೃದ್ಧಿ
  • ತೆಂಗಿನ ಕಾಯಿ, ಶ್ರೀಗಂಧ, ಗೋಡಂಬಿ ಬೆಳೆಗಳಿಗೆ ಪ್ರೋತ್ಸಾಹ
  • ಕೃಷಿ ಉತ್ಪಾದನೆ ವೃದ್ಧಿಗಾಗಿ ಭಾರತ್ ವಿಸ್ತಾರ್ ಯೋಜನೆ
  • ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆಗೆ ಮತ್ತಷ್ಟು ಆದ್ಯತೆ
  • ದಿನಸಿ ಅಂಗಡಿ ಆರಂಭಿಸುವ ಮಹಿಳೆಯರಿಗೆ ವಿಶೇಷ ಸಹಾಯಧನ
  • ಮಹಿಳೆಯರಿಗೆ She Mart ಯೋಜನೆ
  • ದಿವ್ಯಾಂಗರಿಗಾಗಿ ವಿಶೇಷ ಯೋಜನೆ ಘೋಷಿಸಿದ ಕೇಂದ್ರ : ಜನ ಕೌಶಲ್ಯ ಯೋಜನೆ
  • ಪ್ರಮುಖ ನಗರಗಳಿಗೆ 4000 ಎಲೆಕ್ನಿಕ್ ಬಸ್‌ಗಳ ವಿತರಣೆ
  • ರಾಂಚಿ, ತೇಜ್ ಪುರದಲ್ಲಿ ಹೊಸ ನಿಮ್ಹಾನ್ಸ್ ಆಸ್ಪತ್ರೆಗೆ ಘೋಷಣೆ
  • 16 ನೇ ಹಣಕಾಸು ಆಯೋಗದಡಿ ರಾಜ್ಯಗಳಿಗೆ ಅನುದಾನ
  • ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ 1.41 ಲಕ್ಷ ಕೋಟಿ
  • ಹೊಸ ಆದಾಯ ತೆರಿಗೆ ಕಾನೂನು ಘೋಷಣೆ
  • ಅಪಘಾತ ವಿಮೆ ಹಣಕ್ಕೆ ತೆರಿಗೆ ಇಲ್ಲ
  • ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ನೀತಿ ಘೋಷಣೆ
  • ಎಪ್ರಿಲ್‌ನಿಂದ ಹೊಸ ಆದಾಯ ತೆರಿಗೆ ನೀತಿ ಜಾರಿ
  • ಮಾರ್ಚ್ 31ರ ವರೆಗೆ ತೆರಿಗೆ ಸಲ್ಲಿಸಲು ಅವಕಾಶ
  • ವಿದೇಶದಲ್ಲಿರುವ ಆಸ್ತಿ ಘೋಷಣೆಗೆ 6 ತಿಂಗಳ ಕಾಲಾವಕಾಶ
  • ಆರೋಗ್ಯ ಮತ್ತು ವಿದ್ಯಾಭ್ಯಾಸ ಟಿಡಿಎಸ್ ಶೇ.5 ರಿಂದ ಶೇ.2ಕ್ಕೆ ಇಳಿಕೆ
  • ವಿದೇಶ ಯಾತ್ರೆಗಳ ಟಿಸಿಎಸ್ ಶೇ.2ರಷ್ಟು ಕಡಿತ
  • ಹೊಸದಾಗಿ ಹೂಡಿಕೆ ಮಾಡುವ ವಿದೇಶಿ ಕಂಪೆನಿಗಳಿಗೆ ಟ್ಯಾಕ್ಸ್ ಹಾಲಿ ಡೇ
  • ಡೇಟಾ ಸರ್ವೀಸ್ ಸೆಂಟರ್ ಕಂಪೆನಿಗಳಿಗಳಿಗೆ ಟ್ಯಾಕ್ಸ್ ವಿನಾಯಿತಿ
  • ತೆರಿಗೆ ಸಲ್ಲಿಕೆ ತಪ್ಪಿದ್ದಲ್ಲಿ ಇನ್ಮುಂದೆ ಶಿಕ್ಷೆಯಿಲ್ಲ, ಬದಲಿಗೆ ದಂಡ
  • ಶೇ.10 ರಷ್ಟು ದಂಡ ವಿಧಿಸುವ ಬಗ್ಗೆ ಪ್ರಸ್ತಾಪ
  • ವಿಮಾನಗಳ ಬಿಡಿಭಾಗಗಳ ಆಮದು ಸುಂಕ ಇಳಿಕೆ
  • ಚರ್ಮೋತ್ಪನ್ನಗಳ ಮೇಲಿನ ಆಮದು ಸುಂಕ ಇಳಿಕೆ
  • ಮದ್ಯದ ಬೆಲೆಯಲ್ಲಿ ಏರಿಕೆ, ಸಿಗರೇಟ್ ಮೇಲಿನ ಸುಂಕ ಏರಿಕೆ
  • ಅಣುವಿದ್ಯುತ್ ಸ್ಥಾವರ ಪರಿಕರಗಳ ಆಮದು ಸುಂಕ ಇಳಿಕೆ
  • 17 ಕ್ಯಾನ್ಸರ್ ಔಷಧಗಳಿಗೆ ತೆರಿಗೆ ವಿನಾಯಿತಿ
  • ಸೋಲಾರ್ ಬಿಡಿಭಾಗಗಳ ದರ ಇಳಿಕೆ
- Advertisement -

Related news

error: Content is protected !!