ವಿಟ್ಲ(ಅ.30): ವಿಟ್ಲ ಅಳಿಕೆ “ನ್ಯೂ ಪರಿಮಳ ಫಾಸ್ಟ್ ಫುಡ್ ” ಸಸ್ಯಾಹಾರಿ ಮತ್ತು ಮಾಂಸಹಾರಿ ಹೋಟೆಲ್ ಇದರ ಉದ್ಘಾಟನಾ ಕಾರ್ಯಕ್ರಮವು ಇಂದು ಶುಕ್ರವಾರ 30/10/2020ರಂದು ಬೆಳಗ್ಗೆ ಗಣೇಶ್ ಮಯ್ಯ ಇವರ ನೇತೃತ್ವದಲ್ಲಿ ಪೂಜೆ-ಹವನಗಳ ಬಳಿಕ ನಡೆಯಿತು.
ಕಾರ್ಯಕ್ರಮದಲ್ಲಿ ಅಳಕೆ ಸಹಕಾರಿ ಸಂಘದ ಉಪಾಧ್ಯಕ್ಷರಾದ ರೂಪೇಶ್ ರೈ, ಸದಸ್ಯರಾದ ಚಂದ್ರಾವತಿ ಜನಾರ್ಧನ ಸಣ್ಣಗುತ್ತು, ಗೋಳ್ತಮಜಲು PDO ವಿಜಯ ಶಂಕರ ಆಳ್ವ ಮಿತ್ತಳಿಕೆ, ಅಳಕೆ ಪಂಚಾಯತಿನ ನಿಕಟ ಪೂರ್ವ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಸದಸ್ಯರಾದ ಸುಧಾಕರ ಮಡಿಯಾಳ, ಅಳಿಕೆ ಜುಮ್ಮಾ ಮಸೀದಿಯ ಕಾರ್ಯದರ್ಶಿ ಇಬ್ರಾಹಿಂ ಪುಳಿಂಚಾರು, ಲಕ್ಷ್ಮಣ ಪೂಜಾರಿ ಸಣ್ಣಗುತ್ತು, ನೋಣಯ್ಯ ಪೂಜಾರಿ ಸಣ್ಣಗುತ್ತು, ಜಯರಾಮ ಎಂ, ಕುಲದೀಪ್ ಮಡಿಯಾಳ, ಸಂತೋಷ್ ಕುಮಾರ್ ಶೆಟ್ಟಿ ಮಿತ್ತಳಿಕೆ ಮಾಲಕರು ಹೋಟೆಲ್ ಪರಿಮಳ ವಿಟ್ಲ, ಅಳಿಕೆ ಗುರು ಪೂಜಾ ಸೇವಾ ಸಮಿತಿ ಅಧ್ಯಕ್ಷರಾದ ನೇಮಿರಾಜ್ ಉಪಸ್ಥಿತರಿದ್ದರು. ಸಂಸ್ಥೆ ಮಾಲಕರಾದ ವಿಶ್ವನಾಥ ಮತ್ತು ಶ್ರೀಮತಿ ಪ್ರಮೀಳಾ ವಿಶ್ವನಾಥರವರು ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.
ಇಲ್ಲಿನ ವಿಶೇಷತೇ ಏನೇಂದರೆ ಸಸ್ಯಾಹಾರಿ ಮತ್ತು ಮಾಂಸಹಾರಿ ಎರಡು ರೀತಿಯ ಆಹಾರಗಳು ಇಲ್ಲಿ ಗ್ರಾಹಕರಿಗೆ ದೊರೆಯುತ್ತದೆ ಹಾಗೂ ಚೈನೀಸ್ ಶೈಲಿಯ ವಿವಿಧ ಬಗೆಯ ಖಾದ್ಯಗಳು ಲಭ್ಯವಿದೆ ಇಂದು ಮಾಲಕರು ತಿಳಿಸಿರುತ್ತಾರೆ.