Thursday, April 18, 2024
spot_imgspot_img
spot_imgspot_img

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ನಿಧನಕ್ಕೆ ಒಡಿಯೂರು ಶ್ರೀಗಳಿಂದ ಸಂತಾಪ

- Advertisement -G L Acharya panikkar
- Advertisement -

ವಿಟ್ಲ: ಹೃದಯ, ಮನಸ್ಸನ್ನು ಸೂರೆಗೊಳ್ಳುವ ಅನನ್ಯ ಭಾಗವತ ಕರೋಪಾಡಿ ಗ್ರಾಮದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರ ನಿಧನಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ.


ಯಕ್ಷಗಾನದ ಜೀವಾಳವಾದ ಭಾಗವತಿಕೆಯಲ್ಲಿ ತಮ್ಮದೇ ಆದ ವಿಶಿಷ್ಟ ತೆಂಕಬೈಲು ಶೈಲಿಯಿಂದ ಕಲಾರಸಿಕರನ್ನು ರಂಜಿಸಿದ್ದ ಅವರು ಯಕ್ಷಗುರುಗಳಾಗಿಯೂ ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಸಾಯುಜ್ಯವನ್ನು ಆರಾಧ್ಯಮೂರ್ತಿ ಶ್ರೀ ದತ್ತಾಂಜನೇಯ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!