- Advertisement -
- Advertisement -
ಅನಧಿಕೃತವಾಗಿ ವಾಹನಗಳಿಗೆ ಗ್ಯಾಸ್ ಸಿಲಿಂಡರ್ ತುಂಬಿಸುವಾಗ ಅವಘಡ ನಡೆದಿದ್ದು, ಬಾಂಬ್ ರೀತಿ ಎರಡು ಬಾರಿ ಬ್ಲಾಸ್ಟ್ ಆದ ಘಟನೆ ದಾವಣಗೆರೆ ತಾಲೂಕಿನ ದೊಡ್ಡಬೂದಿಹಾಳ್ ಗ್ರಾಮದಲ್ಲಿ ನಡೆದಿದೆ.
ಜನನಿಬಿಡ ಪ್ರದೇಶದಲ್ಲಿ ಕೆಲವು ದಿನಗಳಿಂದ ಓಮಿನಿ ಹಾಗೂ ಆಟೋಗಳಿಗೆ ಅನಧಿಕೃತವಾಗಿ ಎಲ್ಪಿಜಿ ಗ್ಯಾಸ್ ತುಂಬಲಾಗುತ್ತಿತ್ತು. ನಿನ್ನೆ ಇದ್ದಕ್ಕಿದ್ದಂತೆ ಸಿಲಿಂಡರ್ನಲ್ಲಿ ಲೀಕೇಜ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಹೆಚ್ಚಾಗುತ್ತಿದ್ದಂತೆ ಬಾಂಬ್ ರೀತಿ ಓಮಿನಿ ಕಾರು ಸಿಡಿದಿದೆ. ಬಾಂಬ್ ರೀತಿ ಸಿಡಿದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯಯಾಗಿಲ್ಲ. ಇನ್ನು ಈ ಘಟನೆ ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
- Advertisement -