- Advertisement -
- Advertisement -





ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸುವ ಮೂಲಕ ಎರಡು ದೇಶಗಳ ನಡುವಿನ ಪರಸ್ಪರ ಒಪ್ಪಂದವನ್ನು ಮುರಿದಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ತಿಳಿಸಿದ್ದಾರೆ.
ಇದೀಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ನಮ್ಮ ಸೇನೆಯು ತಕ್ಕ ರೀತಿಯ ಪ್ರತ್ಯುತ್ತರ ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಪಾಕಿಸ್ತಾನದ ಗಮನಕ್ಕೂ ತರಲಾಗಿದೆ. ಅಲ್ಲದೆ, ಎಲ್ಲ ಪಡೆಗಳು ಸನ್ನದ್ಧವಾಗಿರುವಂತೆ ಸೂಚಿಸಿದ್ದು, ಯಾವುದೇ ದಾಳಿ ನಡೆದರೂ ತೀವ್ರ ಸ್ವರೂಪದ ಪ್ರತಿ ದಾಳಿ ನಡೆಸುವಂತೆಯೂ ಸೇನೆಗೆ ಸೂಚಿಸಲಾಗಿದೆ ಎಂದರು.
- Advertisement -








