ನರಿಕೊಂಬು: ರಾಷ್ಟ್ರೀಯ ಸ್ವಯಂಸೇವಕ ಸಂಘ ನರಿಕೊಂಬು ಮಂಡಲ ಇದರ ವತಿಯಿಂದ ಉಚಿತ ಕೊರೋನಾ ಲಸಿಕಾಕರಣ ಕಾರ್ಯಕ್ರಮ ನರಿಕೊಂಬು ಗ್ರಾಮದ ಲಕ್ಷ್ಮೀನರಸಿಂಹ ದೇವಸ್ಥಾನದ ಬಳಿ ಅನ್ನಪೂರ್ಣ ಹಾಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮದಾಸ್ ಬಂಟ್ವಾಳ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಪುರುಷೋತ್ತಮ ಸಾಲಿಯಾನ್, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಕೇಶವ ಪಿ.ಎಚ್, ನರಿಕೊಂಬು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಪ್ರಕಾಶ್ ಮಡಿಮುಗೇರ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀ ಪ್ರಕಾಶ್ ಕೋಡಿಮಜಲು, ಶ್ರೀ ಸಂತೋಷ್ ಶಂಬೂರು, ಶ್ರೀ ರವಿ ಅಂಚನ್, ಶ್ರೀಮತಿ ಚಿತ್ರ , ಶ್ರೀಮತಿ ಉಶಾಲಾಕ್ಷಿ , ಶ್ರೀ ಚೇತನ್ ಏಳಬೆ, ಶ್ರೀ ಯೋಗೀಶ್ ಶಾಂತಿಲ, ಶ್ರೀ ರಂಜಿತ್ ಕೆದ್ದೇಳು, ಶ್ರೀಪುರುಷೋತ್ತಮ ಎಸ್ ಮಾಣಿಮಜಲು, ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು ಇದರ ನಿರ್ದೇಶಕರಾದ ಶ್ರೀಶ ರಾಯಸ, ಶ್ರೀ ಪ್ರೇಮನಾಥ ಶೆಟ್ಟಿ, ಶ್ರೀ. ಯಶವಂತ್ ನಾಯಿಲ, ಭಾರತೀಯ ಜನತಾ ಪಕ್ಷ ಬಂಟ್ವಾಳ ಮಂಡಲದ ಮಹಿಳಾ ಮೋರ್ಚಾ ಕೋಶಾಧಿಕಾರಿ ಶ್ರೀಮತಿ ಸೌಮ್ಯ ಪ್ರಶಾಂತ್ ಮರ್ಧೋಳಿ, ಬೂತ್ ಸಮಿತಿ ಅಧ್ಯಕ್ಷರಾದ ರಾಜೇಶ್ ಮೊಗರ್ನಾಡು ಮತ್ತಿತರರು ಭಾಗವಹಿಸಿದ್ದರು.