Wednesday, April 24, 2024
spot_imgspot_img
spot_imgspot_img

ಫರಂಗಿಪೇಟೆ: ಬಸ್-ಬೈಕ್ ಮಧ್ಯೆ ಅಪಘಾತ-ವಿಟ್ಲದ ಪ್ರಖ್ಯಾತ ಬಾಣಸಿಗ ಕಾಂತಡ್ಕ ಶಂಕರ ನಾರಾಯಣ ಭಟ್ ಮೃತ್ಯು

- Advertisement -G L Acharya panikkar
- Advertisement -

ಫರಂಗಿಪೇಟೆ: ಫರಂಗಿಪೇಟೆಯಲ್ಲಿ ಬಸ್-ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು. ವಿಟ್ಲದ ಪ್ರಖ್ಯಾತ ಬಾಣಸಿಗ ಕಾಂತಡ್ಕ ಶಂಕರ ನಾರಾಯಣ ಭಟ್ ಸಾವನ್ನಪ್ಪಿದ್ದಾರೆ.

ಗುರುವಾರ ಸಂಜೆ ವಿಟ್ಲದ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ಸಂದರ್ಭ ಫರಂಗಿಪೇಟೆಯಲ್ಲಿ ಸರಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವಿಟ್ಲದ ನೆತ್ರಕೆರೆ ನಿವಾಸಿ ಶಂಕರನಾರಾಯಣ ಭಟ್ ಗಂಭೀರ ಗಾಯಗೊಂಡಿದ್ದರು.

ತಕ್ಷಣವೇ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರೂ ಶುಕ್ರವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಭಟ್ ಮೃತಪಟ್ಟಿದ್ದಾರೆ. ಇವರು ವಿಟ್ಲದ ಪ್ರಖ್ಯಾತ ಅಡುಗೆ ಭಟ್ಟ(ಪಾಕಪ್ರವೀಣ)ರಾಗಿದ್ದರು.

- Advertisement -

Related news

error: Content is protected !!