Saturday, April 27, 2024
spot_imgspot_img
spot_imgspot_img

ಪಿಣರಾಯಿ ವಿಜಯನ್​​ ದೇವರಿಗೆ ಸಮಾನ ಎಂಬ ಪೋಸ್ಟರ್ ವೈರಲ್​​​; ಕಮ್ಯುನಿಷ್ಟರ ವಿರುದ್ಧ ವಿಪಕ್ಷಗಳ ಆಕ್ರೋಶ

- Advertisement -G L Acharya panikkar
- Advertisement -

ತ್ರಿಶೂರ್​: “ಲಾಕ್ಡೌನ್​​ ಸಂದರ್ಭದಲ್ಲಿ ಲಕ್ಷಾಂತರ ಬಡವರ ಹಸಿವು ನೀಗಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್ ದೇವರಿಗೆ ಸಮಾನ” ಎಂಬ ಪೋಸ್ಟರ್​​ವೊಂದು ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ.

ಕೇರಳದ ಮಲಪ್ಪುರಂನಲ್ಲಿರುವ ವಿಷ್ಣು ದೇವಸ್ಥಾನದ ಆವರಣದಲ್ಲಿ ಸಿಎಂ ಪಿಣರಾಯಿ ವಿಜಯನ್​​​ ಕುರಿತಾದ ಹೀಗೊಂದು ಪೋಸ್ಟರ್​​ ಹಾಕಿರುವುದು ಈಗ ಭಾರೀ ಚರ್ಚೆಯನ್ನು ಹುಟ್ಟಿ ಹಾಕಿದೆ.

ಸಿಎಂ ಪಿಣರಾಯಿ​ ವಿಜಯನ್ ಬಲಗೈ​ ಮುಷ್ಟಿ ಬಿಗಿ ಹಿಡಿದು, ತಾನೊಬ್ಬ ಕಮ್ಯುನಿಸ್ಟ್​ ಹೋರಾಟಗಾರ ಎಂಬರ್ಥದಲ್ಲಿ ತೆಗೆಸಿರುವ ಫೋಟೋ ಬಳಸಿ ಮಾಡಿರುವ ಪೋಸ್ಟರ್​ ಇದಾಗಿದೆ. ಪೋಸ್ಟರ್​​ನಲ್ಲಿ ದೇವರು ಎಲ್ಲಿದ್ದೀರಿ ಎಂದು ಕೇಳಿದ್ರಿ, ಇವರೇ ನಮ್ಮ ದೇವರು ಎಂಬ ಕ್ಯಾಪ್ಷನ್​​ ಕೂಡ ಪ್ರಿಂಟ್​ ಮಾಡಲಾಗಿದೆ.

ಇನ್ನು, ಸಿಪಿಎಂ ಪಕ್ಷವೂ ಪಿಣರಾಯಿ ವಿಜಯನ್​​ ಫೋಟೋ ಸಂಬಂಧ ಪತ್ರಿಕಾ ಹೇಳಿಕೆ ನೀಡಿದೆ. ಈ ಕೃತ್ಯಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಯಾರೋ ಪಿಣರಾಯಿ ವಿಜಯನ್​​ ಮೇಲಿನ ಅಭಿಮಾನದಿಂದ ಹೀಗೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ಸೇರಿದಂತೆ ಇತರೆ ವಿರೋಧ ಪಕ್ಷಗಳ ಪಿಣರಾಯಿ ವಿಜಯನ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೇಳೋದೊಂದು ಮಾಡೋದೊಂದು ಎಂದು ಸಿಪಿಎಂ ಸಿದ್ಧಾಂತದ ಬಗ್ಗೆ ಕುಟುಕಿದ್ದಾರೆ.

- Advertisement -

Related news

error: Content is protected !!