- Advertisement -
- Advertisement -
ಸುರತ್ಕಲ್: 1930ರಿಂದ ಮಧ್ಯಮ ವರ್ಗದವರ ಪ್ರೀತಿ, ವಿಶ್ವಾಸವನ್ನು ಗಳಿಸುತ್ತಾ, ಉತ್ತಮ ಗುಣಮಟ್ಟದ ಉಡುಗೆ, ತೊಡುಗೆಗಳನ್ನು ಜನಸಾಮಾನ್ಯರ ಕೈಗೆಟಕುವ ದರದಲ್ಲಿ ನೀಡುತ್ತಾ ಬಂದಿರುವ ಪಿ.ಕೆ.ದೂಜ ಪೂಜಾರಿ ಟೆಕ್ಸಟೈಲ್ಸ್ ಬಳಗದ 15ನೇ ಮಳಿಗೆ ನಮ್ಮ ಸುರತ್ಕಲ್ ನಲ್ಲಿ ಆರಂಭಗೊಂಡಿರುವುದು ಈ ಭಾಗದ ಜನರ ಬಹುಕಾಲದ ಆಶಯ ಈಡೇರಿದಂತಾಗಿದೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹೇಳಿದರು.
ಅವರು ಸುರತ್ಕಲ್ ನ ಇಡ್ಯಾದ ಅಭೀಶ್ ಬಿಜಿನಸ್ ಸೆಂಟರ್ ನಲ್ಲಿ ನೂತನ ಪಿ.ಕೆ.ದೂಜ ಪೂಜಾರಿ ಟೆಕ್ಸಟೈಲ್ಸ್ ಮಳಿಗೆಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸುತ್ತಾ, ಈ ಸಂಸ್ಥೆ ನಿರಂತರವಾಗಿ ಹೀಗೆ ಜನರ ಪ್ರೀತಿ, ಭರವಸೆಯನ್ನು ಗಳಿಸುತ್ತಾ ಅಭಿವೃದ್ಧಿಯ ಶಿಖರವನ್ನು ಏರಲಿ ಎಂದು ಅವರು ಹಾರೈಸಿದರು.
- Advertisement -