Friday, May 3, 2024
spot_imgspot_img
spot_imgspot_img

ಪೋಲಿಸ್ ಸಬ್ ಇನ್ಸ್ಪೆಕ್ಟರ್: ದ.ಕ ಜಿಲ್ಲೆಯ ಸ್ವೀಕೃತ್ ರೈ ರಾಜ್ಯಕ್ಕೆ 54ನೇ ರಾಂಕ್

- Advertisement -G L Acharya panikkar
- Advertisement -

ಮಂಗಳೂರು(ನ.9): .2019-20ರ ಬ್ಯಾಚ್ ನ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಅಂತಿಮ ಪರೀಕ್ಷೆಯಲ್ಲಿ ದ.ಕ ಜಿಲ್ಲೆಯ ಪುತ್ತೂರಿನ ಸ್ವೀಕೃತ್ ರೈ ರಾಜ್ಯಕ್ಕೆ 54ನೇ ರಾಂಕ್ ಪಡೆದು ಬೆಂಗಳೂರು ನಗರ ಪೋಲಿಸ್ ಕಮಿಷನರೇಟ್ ವ್ಯಾಪ್ತಿಗೆ ಆಯ್ಕೆಯಾಗಿದ್ದಾರೆ.

ಮಂಗಳೂರಿನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ವಿದ್ಯಾಭ್ಯಾಸ ಮಾಡಿರುವ ಇವರು, ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಯನ್ನು ಪಡೆದಿರುವರು. ಅಮೇರಿಕದ ಪ್ರತಿಷ್ಠಿತ ಅಕ್ಸೆಂಚರ್ ಕಂಪನಿಗೆ ಇದೇ ಕಾಲೇಜಿನ ಕ್ಯಾಂಪಸ್ ನಲ್ಲಿ ಆಯ್ಕೆಯಾಗಿ, ಬೆಂಗಳೂರಿನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು.

ಮಂಗಳೂರಿನ ರೊಸಾರಿಯೊ ಪ್ರೌಢಶಾಲೆಯ ದೈಹಿಕ ನಿರ್ದೇಶಕ, NCC ವಿಭಾಗದ ನೇವಲ್ ಆಫೀಸರ್ ಮತ್ತು ಕ್ರೀಡಾಭಾರತಿ ಮಂಗಳೂರಿನ ಅಧ್ಯಕ್ಷರಾಗಿರುವ ಕೆಲ್ಲಾಡಿ ಶ್ರೀ ಕಾರಿಯಪ್ಪ ರೈ ಮತ್ತು ಬಳಜ್ಜ ಶ್ರೀಮತಿ ಸುಭಾಷಿಣಿ. ಕೆ. ರೈಯವರ ಸುಪುತ್ರ ,ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಕೆ ಎಮ್ ಎಫ್ ಡೈರೆಕ್ಟರ್ ಎಸ್ ಬಿ ಜಯರಾಮ ರೈ ಬಳಜ್ಜ ಇವರ ಅಳಿಯ ,ಪುತ್ತೂರಿನ ಯುವ ಉದ್ಯಮಿ ಮತ್ತು ದ.ಕ ಬಿಜೆಪಿ ಯುವಮೋರ್ಚಾಉಪಾಧ್ಯಕ್ಷರಾದ ಸಹಜ್ ರೈ ಬಳಜ್ಜರವರ ಸಹೋದರರಾದ ಇವರು, ಇನ್ನು ಕೆಲವೇ ದಿನಗಳಲ್ಲಿ ಕತ೯ವ್ಯಕ್ಕೆ ಹಾಜರಾಗಲಿರುವರು.

- Advertisement -

Related news

error: Content is protected !!