Saturday, April 27, 2024
spot_imgspot_img
spot_imgspot_img

ನದಿಯಲ್ಲಿ ಮುಳುಗುತ್ತಿದ್ದವನನ್ನು ರಕ್ಷಿಸಲು ಹೋಗಿ ನಾಲ್ವರು ನೀರು ಪಾಲು

- Advertisement -G L Acharya panikkar
- Advertisement -

ಕಾವೇರಿ ನದಿಯಲ್ಲಿ ಈಜಲು‌ ಹೋಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಮಂಡ್ಯದ ಮಳವಳ್ಳಿಯ ಮುತ್ತತ್ತಿಯ ಕಾವೇರಿ ನದಿಯ ಬಳಿ ನಡೆದಿದೆ.

ಮೈಸೂರು ನಗರದ ವಿದ್ಯಾರಣ್ಯಪುರಂನ ನಾಗೇಶ್(55), ಭರತ್(17), ಗುರುಕುಮಾರ್(32) ಮತ್ತು ಮಹದೇವ(14) ಮೃತ ದುದೈವಿಗಳು.

ಧಾರ್ಮಿಕ ಕಾರ್ಯಕ್ರಮಕ್ಕೆಂದು ಸುಮಾರು 50 ಜನರು ಬಸ್‌ನಲ್ಲಿ ಮುತ್ತತ್ತಿಗೆ ಬಂದಿದ್ದರು. ಕಾವೇರಿ ನದಿಯಲ್ಲಿ ಈಜಾಡುವ ವೇಳೆ ನೀರಿನಲ್ಲಿ ಒಬ್ಬ ಮುಳುಗಿದ್ದು, ರಕ್ಷಣೆಗೆ ಹೋದ ಮೂವರು ಸೇರಿ ನಾಲ್ವರು ನೀರು ಪಾಲಾಗಿದ್ದಾರೆ.

ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!