- Advertisement -
- Advertisement -
ಪುತ್ತೂರು: ಯೂತ್ ಕಾಂಗ್ರೆಸ್ ಚುನಾವಣಾ ಕ್ಯಾನ್ವಾಸ್ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತನಾದ ಗೋಳಿಕಟ್ಟೆ ನಿವಾಸಿ ಮಹಮ್ಮದ್ ಆಲಿ ಹಾಗೂ ಎಸ್ ಡಿ ಪಿ ಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು,ಹಲ್ಲೆ ನಡೆದ ಘಟನೆ ಗೋಳಿಕಟ್ಟೆಯಲ್ಲಿ ನಡೆದಿದೆ.
ಘಟನೆಯಲ್ಲಿಯೂತ್ ಕಾಂಗ್ರೆಸ್ ಕಾರ್ಯಕರ್ತ ಗೋಳಿಕಟ್ಟೆ ನಿವಾಸಿ ಮಹಮ್ಮದ್ ಅಲಿ ರವರು ಗಾಯಗೊಂಡಿದ್ದು ಪುತ್ತೂರು ಸರಕಾರಿ ಆಸ್ಪತ್ತೆಯಲ್ಲಿ ದಾಖಲಾಗಿದ್ದಾರೆ.ವಳತ್ತಡ್ಕ ನಿವಾಸಿಗಳಾದ ಸಿರಾಜ್, ಮುನೀರ್, ನೌಫಲ್ ಶರೀಫ್ ಎಂಬವರು ಮಹಮದ್ ಆಲಿ ಅವರಿಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಹಲ್ಲೆ ನಡೆಸಿದವರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.ಆಸ್ಪತ್ರೆಗೆ ಶಾಸಕ ಯು.ಟಿ.ಖಾದರ್, ಕಾವು ಹೇಮನಾಥ ಶೆಟ್ಟಿ, ಮಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಮ್.ರವೂಫ್ ಭೇಟಿ ನೀಡಿ ಸಂತೈಸಿದರು.
- Advertisement -