- Advertisement -
- Advertisement -
ಪುಣೆ: ಪುಣೆ ರಾಜೀವ್ ಗಾಂಧಿ ಮೃಗಾಲಯದಲ್ಲಿ ಗುರುವಾರ ಬೀದಿ ನಾಯಿಗಳ ದಾಳಿಗೆ ನಾಲ್ಕು ಕೃಷ್ಣಮೃಗಗಳು ಬಲಿಯಾಗಿದ್ದು, ಒಂದು ಕೃಷ್ಣಮೃಗ ತೀವ್ರವಾಗಿ ಗಾಯಗೊಂಡಿದೆ.
ಪುಣೆಯ ಕತ್ರಾಜ್ನಲ್ಲಿರುವ ಮೃಗಾಲಯದಲ್ಲಿ ಈ ಘಟನೆ ನಡೆದಿದೆ ಎಂದು ಮೃಗಾಲಯದ ನಿರ್ದೇಶಕ ರಾಜ್ಕುಮಾರ್ ಜಾಧವ್ ತಿಳಿಸಿದ್ದಾರೆ. ಕೆಲವು ಬೀದಿ ನಾಯಿಗಳು ಕಣ್ತಪ್ಪಿಸಿ ಮೃಗಾಲಯಕ್ಕೆ ನುಸುಳಿ ಬಂದು, ಕೃಷ್ಣಮೃಗಗಳಿರುವ ಆವರಣದೊಳಗೆ ಸಿಲುಕಿಕೊಂಡವು. ಈ ನಾಯಿಗಳ ದಾಳಿಯಿಂದ ಅಘಾತಗೊಂಡ ನಾಲ್ಕು ಕೃಷ್ಣಮೃಗಗಳು (ಎರಡು ಗಂಡು, ಎರಡು ಹೆಣ್ಣು) ಸ್ಥಳದಲ್ಲೇ ಮೃತಪಟ್ಟವು’ಎಂದು ತಿಳಿಸಿದ್ದಾರೆ.
ನಾಯಿ ಕಚ್ಚಿದ್ದರಿಂದ ಒಂದು ಕೃಷ್ಣಮೃಗ ತೀವ್ರ ಗಾಯಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೃಗಾಲಯದ ಒಂದು ಭಾಗದಲ್ಲಿ ಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಆ ಭಾಗದಿಂದ ನಾಯಿಗಳು ನುಸುಳಿ ಬಂದಿರಬಹುದು ಎಂದು ಶಂಕಿಸಿದ್ದಾರೆ. ಮೃಗಾಲಯದಲ್ಲಿ ಒಟ್ಟು 34 ಕೃಷ್ಣಮೃಗಗಳಿದ್ದು, ನಾಲ್ಕು ಸಾವನ್ನಪ್ಪಿದ್ದರಿಂದ ಮೂವತ್ತು ಉಳಿದಿವೆ.
- Advertisement -