Thursday, June 26, 2025
spot_imgspot_img
spot_imgspot_img

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಸಹಪಾಠಿ ಯುವತಿಯನ್ನು ಗರ್ಭವತಿ ಮಾಡಿದ ಯುವಕ;

- Advertisement -
- Advertisement -

ಪ್ರಕರಣ ದಾಖಲು; ಆರೋಪಿ ಪರಾರಿ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಸಹಪಾಠಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿದ ಆರೋಪದ ಮೇಲೆ ಯುವಕನೊಬ್ಬನ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ.

ಆರೋಪಿ ಯುವಕನನ್ನು ಪುತ್ತೂರಿನ ಪುಭಾವಿ ರಾಜಕಾರಣಿ. ವಾಸ್ತು ಶಿಲ್ಪಿಯೊಬ್ಬರ ಪುತ್ರ ಬಪ್ಪಳಿಗೆ ನಿವಾಸಿ ಪಿ ಜಿ ಕೃಷ್ಣ ಜೆ. ರಾವ್ (21) ಎಂದು ಗುರುತಿಸಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು. ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ.

ಸಂತ್ರಸ್ತ (21) ಕೂಡ ಪುತ್ತೂರು ನಗರಸಭಾ ವ್ಯಾಪ್ತಿಯ ನಿವಾಸಿಯಾಗಿದ್ದು, ಮಂಗಳೂರಿನ ಕಾಲೇಜ್ ಒಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಸಂತ್ರಸ್ತ ಹಾಗೂ ಆರೋಪಿ ಕೃಷ್ಣ ಪುತ್ತೂರು ಪ್ರೌಢಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಪ್ರೌಢಾವಸ್ಥೆಗೆ ಬಂದ ನಂತರ ಇವರಿಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಈ ಆತ್ಮೀಯತೆಯಿಂದಾಗಿ ಸಂತ್ರಸ್ತ ಆರೋಪಿಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದಳು.

ಸಂತ್ರಸ್ತ ಯುವತಿಯು ಈ ಬಗ್ಗೆ ಜೂ.24 ರಂದು ರಾತ್ರಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಅದರ ಪ್ರಕಾರ, 2024ರ ಅಕ್ಟೋಬರ್ 11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಕೃಷ್ಣ. ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಬಳಿಕ ಯುವತಿಯನ್ನು ಮಲಗುವ ಕೋಣೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕಕ್ಕೆ ಯತ್ನಿಸಿದ್ದಾನೆ. ಯುವತಿ ವಿರೋಧಿಸಿದಾಗ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸಿ ಈ ವಿಷಯವನ್ನು ರಹಸ್ಯವಾಗಿಡುವಂತೆ ತಿಳಿಸಿದ್ದಾನೆ. ನಂತರ, ಜನವರಿ ತಿಂಗಳ ಯಾವುದೋ ಒಂದು ದಿನಾಂಕದಂದು ಮತ್ತೆ ಯುವತಿಯನ್ನು ಮನೆಗೆ ಕರೆಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಆ ವೇಳೆಯೂ ಆರೋಪಿಯ ತಂದೆ ತಾಯಿ ಮನೆಯಲ್ಲಿರಲಿಲ್ಲ.

ಯುವತಿಯು 2024ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ಮುಟ್ಟಾಗಿದ್ದಳು. ಇದರಿಂದ ತಾನು ಗರ್ಭಿಣಿಯಾಗಿರುವ ಅನುಮಾನ ಬಂದಿದ್ದು. ಈ ವಿಚಾರವನ್ನು ಆರೋಪಿ ಕೃಷ್ಣನಲ್ಲಿ ತಿಳಿಸಿದ್ದಾಳೆ. ಕೃಷ್ಣ ಮೇ ತಿಂಗಳಿನಲ್ಲಿ ಯುವತಿಯನ್ನು ಮಂಗಳೂರಿನ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ, ಸಂತ್ರಸ್ತ ಯುವತಿಯು ಏಳೂವರೆ ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದಿದೆ.

ನಾನು ನಿನ್ನನ್ನು ಮದುವೆಯಾಗುತ್ತೇನೆ. ಈ ವಿಚಾರವನ್ನು ಯಾರಲ್ಲೂ ಹೇಳಬೇಡ” ಎಂದು ಕೃಷ್ಣ ತಿಳಿಸಿದ್ದಾನೆ. ಆದರೂ ಯುವತಿ ತನ್ನ ತಂದೆ ತಾಯಿಗೆ ಈ ವಿಚಾರವನ್ನು ತಿಳಿಸಿದ್ದಾಳೆ. ಯುವತಿಯ ಮನೆಯವರು ಯುವಕನ ಮನೆಯವರಿಗೆ ಈ ವಿಷಯ ತಿಳಿಸಿದಾಗ, ಅವರು ಮದುವೆ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು ಎಂದು ಯುವತಿ ಆರೋಪಿಸಿದ್ದಾಳೆ.

ಆದರೆ, ಈಗ ಯುವತಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಕೃಷ್ಣ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ಕೋರಿದ್ದಾಳೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 61(1) ಹಾಗೂ 69 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಕೃಷ್ಣ ಜೆ. ರಾವ್ ಪತ್ತೆಗಾಗಿ ತೀವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಆರೋಪಿಯು ನಗರಸಭಾ ಸದಸ್ಯ ಪಿಜಿ ಜಗನ್ನಿವಾಸ್ ರಾವ್ ರವರ ಪುತ್ರ ಎಂದು ತಿಳಿದು ಬಂದಿದೆ.

ಕಳೆದ ಮೇ ತಿಂಗಳಿನಲ್ಲಿ ಗರ್ಭಿಣಿಯಾಗಿರುವ ವಿಚಾರ ತಿಳಿಯುತ್ತಲೇ ಸಂತ್ರಸ್ತ ಯುವತಿ ತನ್ನ ಪೋಷಕರೊಂದಿಗೆ ಪುತ್ತೂರು ಮಹಿಳಾ ಠಾಣೆಗೆ ಆಗಮಿಸಿ ದೂರು ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಸಂದರ್ಭದಲ್ಲಿ. ಆರೋಪಿ ಕೃಷ್ಣನ ಪೋಷಕರು ವಿವಾಹ ಮಾಡಿಕೊಳ್ಳುವುದಾಗಿ ಯುವತಿಯ ಕುಟುಂಬದವರನ್ನು ಒಪ್ಪಿಸಿ ಕೇಸ್ ಆಗದಂತೆ ನೋಡಿಕೊಂಡಿದ್ದರು. ಅಲ್ಲದೇ ತಾಲೂಕಿನ ಕೆಲವು ಸಂಘಟನೆಯ ಪ್ರಮುಖರು, ರಾಜಕೀಯ ನಾಯಕರು ಹಾಗೂ ಜನಪ್ರತಿನಿಧಿಗಳು ಯುವತಿಯ ಪೋಷಕರಿಗೆ ಒತ್ತಡ ಹಾಕಿ ಕೇಸ್ ಮಾಡದಂತೆ ತಡೆದಿದ್ದಾರೆ ಹಾಗೂ ವಿವಾಹ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಕೃಷ್ಣನಿಗೆ ಜೂನ್‌ನಲ್ಲಿ 21 ವರ್ಷ ತುಂಬಲಿದ್ದು. ತಕ್ಷಣವೇ ವಿವಾಹ ನೋಂದಣಿ ಮಾಡಿಸಿಕೊಂಡು, ಮಗು ಜನನದ ಬಳಿಕ ಶಾಸ್ರೋಕ್ತವಾಗಿ ವಿವಾಹ ಮಾಡುವ ಬಗ್ಗೆ ಆತನ ಪೋಷಕರು ಪೊಲೀಸ್ ಠಾಣೆಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿರುವ ಬಗ್ಗೆ ಅಂದು ಸುದ್ದಿಯಾಗಿತ್ತು. ಇದೀಗ ಕೃಷ್ಣನಿಗೆ ವಿವಾಹ ಯೋಗ್ಯ ವಯಸ್ಸು ಪೂರ್ಣಗೊಂಡಿದ್ದು ಮದುವೆ ಆಗುವಂತೆ ಯುವತಿಯ ಪೋಷಕರು ಒತ್ತಡ ಹಾಕಿದ್ದು, ಯುವಕ ನಿರಾಕರಿಸಿದ್ದಾನೆ ಎನ್ನಲಾಗಿದೆ. ಅಂದು ಪಂಚಾತಿಕೆ ಮಾಡಿದವರು ಇದೀಗ ಕೈ ಕೊಟ್ಟಿದ್ದು, ಯುವತಿ ಹಾಗು ಪೋಷಕರು ಇದೀಗ ಮತ್ತೆ ಠಾಣೆ ಮೆಟ್ಟಿಲೇರಿದ್ದಾರೆ.

- Advertisement -

Related news

error: Content is protected !!